ಆ.14: ವ್ಯಕ್ತಿತ್ವ ವಿಕಸನ ಶಿಬಿರ

Update: 2016-08-07 18:16 GMT

ಕಾರ್ಕಳ, ಆ.7: ಹೊಸಸಂಜೆ ಬಳಗ ಕಾರ್ಕಳ ಮತ್ತು ಮಂಗಳೂರಿನ ಗ್ರೂಪ್ ಜಿಎಸ್‌ಬಿ ಹೆಲ್ಪ್‌ಲೈನ್ ಚಾರಿಟೇಬಲ್ ಟ್ರಸ್ಟ್‌ನ ಸಂಯುಕ್ತಾಶ್ರಯದಲ್ಲಿ ಆ.14ರಂದುಕಾರ್ಕಳ ಕಾಶೀಮಠದ ಸಭಾಂಗಣದಲ್ಲಿ ನೈಪುಣ್ಯತಾ -2016 ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಷಣ ಕಲೆ, ದೇಶ ಮತ್ತು ಮೌಲ್ಯ, ಧ್ವನಿ ಬಳಕೆ ಹಾಗೂ ಆಂಗಿಕ ಅಭಿನಯ, ನಾಯಕತ್ವ ಕೌಶಲ್ಯ, ಆರೋಗ್ಯ ಆಹಾರ ಆಯುರ್ವೇದ ಕುರಿತು ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ಶಿಬಿರ ಸಂಪೂರ್ಣ ಉಚಿತವಾಗಿದ್ದು, 8, 9, 10 ತರಗತಿಯ ಗೌಡಸಾರಸ್ವತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. ಶಿಬಿರದಲ್ಲಿ ಭಾಗವಹಿಸುವ ಆಸಕ್ತರು ಆ.11ರ ಒಳಗಾಗಿ ಆರ್. ದೇವರಾಯ ಪ್ರಭು, ಹೊಸಸಂಜೆ ಬಳಗ, ಕಾರ್ಕಳ ಅಥವಾ ಮೊ.ಸಂ: 9845939051ನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಸಹಾಯಕ ತೋಟಗಾರಿಕ ಅಧಿಕಾರಿ ಲಕ್ಷ್ಮಣ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News