ಕಾರು ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು

Update: 2016-08-08 18:31 GMT

ಪಡುಬಿದ್ರಿ, ಆ.8: ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಎರ್ಮಾಳ್ ಬುಡಗಿ ಪೆಟ್ರೋಲ್ ಪಂಪ್ ಬಳಿ ನಡೆದಿದೆ ರವಿವಾರ ಮಧ್ಯಾಹ್ನ್ನ ನಡೆದಿದೆ.
ಮೃತರನ್ನು ಶಿರ್ವ ಬಂಟಕಲ್ಲು ನಿವಾಸಿ ಕಿಟ್ಟು ಮೂಲ್ಯ(73) ಎಂದು ಗುರು ತಿಸಲಾಗಿದೆ. ಇವರು ನಾಗರಪಂಚಮಿ ಪ್ರಯುಕ್ತ ಎರ್ಮಾಳ್‌ಗೆ ತನ್ನ ಟಿವಿಎಸ್ ಮೊಪೆಡ್‌ನಲ್ಲಿ ತೆರಳಿದ್ದು, ಅಲ್ಲಿಂದ ವಾಪಸು ಮನೆಗೆ ಬರುತ್ತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆಯಿತು. ಪರಿಣಾಮ ಗಂಭೀರವಾಗಿ ಗಾಯಗೊಂಡ ಕಿಟ್ಟು ಮೂಲ್ಯ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News