ಕೆಪಿಎಸ್ಸಿಗೆ ಶ್ಯಾಮ್ ಭಟ್ ಪೂಜಾರಿ ಆಕ್ಷೇಪ
Update: 2016-08-08 18:34 GMT
ಮಂಗಳೂರು, ಜು.8: ದಲಿತರ ಪರವಾಗಿ ಮತ್ತು ನಕಲಿ ಗೋರಕ್ಷಕರ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದೆರಡು ದಿನಗಳಲ್ಲಿ ನೀಡಿರುವ ಹೇಳಿಕೆಗಳು ಅವರ ಪ್ರಬುದ್ಧತೆಯನ್ನು ತಿಳಿಸುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಶ್ಲಾಸಿದ್ದಾರೆ.
ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಪ್ರಧಾನಿಯವರ ಹೇಳಿಕೆ ಇಡೀ ವಿಶ್ವಕ್ಕೇ ಒಂದು ಮಾದರಿ ಸಂದೇಶ ನೀಡಿದೆ ಎಂದರು.
ಪ್ರಧಾನಿಯವರು ಈಗ ಹೇಳಿದ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ತಾವು ಈ ಹಿಂದೆಯೇ ಹೇಳಿದ್ದರೂ ಆಗ ಯಾರೂ ಅದನ್ನು ಅರ್ಥ ಮಾಡಿಕೊಂಡಿರಲಿಲ್ಲ ಎಂದು ಪೂಜಾರಿ ಹೇಳಿದರು. ಕೆಪಿಎಸ್ಸಿಗೆ ಟಿ. ಶ್ಯಾಮ್ಭಟ್ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಶ್ಯಾಮ್ಭಟ್ ಮೇಲೆ ಆರೋಪಗಳಿರುವುದರಿಂದ ಅವರನ್ನು ನೇಮಕ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.