ಸುಳ್ಯ ಅಖಂಡ ಭಾರತ ಸಂಕಲ್ಪ ದಿನಾಚರಣೆ

Update: 2016-08-14 11:35 GMT

 ಸುಳ್ಯ,ಆ.14: ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷದ್, ಬಜರಂಗದಳ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ಪಂಜಿನ ಮೆರವಣಿಗೆ ಸುಳ್ಯದಲ್ಲಿ ನಡೆಯಿತು.

ಸಂಜೆ ಸುಳ್ಯ ಶಾಸ್ತ್ರಿ ವೃತ್ತದಿಂದ ಮೆರವಣಿಗೆ ಆರಂಭವಾಯಿತು. ಬಳಿಕ ಸುಳ್ಯ ಮುಖ್ಯ ರಸ್ತೆಯಾಗಿ ಸಾಗಿದ ಮೆರವಣಿಗೆ ಗಾಂಧಿನಗರ, ವಿಷ್ಣು ಸರ್ಕಲ್‌ಗಾಗಿ ಸಾಗಿ ಬಂದು ಖಾಸಗಿ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡಿತು. ಅಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷದ್‌ನ ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿ ವಹಿಸಿದ್ದರು. ಮುಖ್ಯ ಭಾಷಣಗಾರರಾಗಿ ಮಂಗಳೂರಿನ ಶ್ಯಾಮ್ ಸುಂದರ್ ಭಟ್ ಆಗಮಿಸಿದ್ದರು.

ಹಿಂದೂ ದರ್ಮದ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದೆ, ಇದು ನಮ್ಮವರಿಂದಲೇ ಹೊರತು ಅನ್ಯರಿಂದಾಗಿ ಅಲ್ಲ , ಹೀಗಾಗಿ ಪ್ರತಿಯೊಬ್ಬ ಹಿಂದುಕೂಡ ಧರ್ಮದ ರಕ್ಷಣೆಗಾಗಿ ಜೀವವನ್ನು ಪಣವಾಗಿಡುವ ಸಂದರ್ಭ ಬಂದಿದೆ ಎಂದರು. ಭಜರಂಗ ದಳದ ಸಂಚಾಲಕ ಲತೀಶ್ ಗುಂಡ್ಯ ಸ್ವಾಗತಿಸಿ. ಗಿರೀಶ್ ಕುಂಟಿನಿ ಕಾರ್ಯಕಮ ನಿರೂಪಿಸಿದರು. ಶಾಸಕ ಎಸ್. ಅಂಗಾರ, ಹರೀಶ್ ಕಂಜಿಪಿಲಿ, ಪಿ.ಕೆ. ಉಮೇಶ್, ಪ್ರಕಾಶ್ ಹೆಗ್ಡೆ, ಸುಭೋದ್ ಶೆಟ್ಟಿ, ಉದಯ ಕುಮಾರ್ ಆಚಾರ್ ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News