‘ದೊಂಬರಾಟ’ ಚಿತ್ರತಂಡದಿಂದ ಮುದ್ದುಕೃಷ್ಣ ವೇಷ ಫೋಟೊ ಸ್ಪರ್ಧೆ

Update: 2016-08-14 18:47 GMT

ಮಂಗಳೂರು, ಆ. 14: ರಾಜೇಶ್ ಬ್ರಹ್ಮಾವರ ನಿರ್ಮಾಣದ ‘ದೊಂಬರಾಟ’ ತುಳು ಚಲನಚಿತ್ರ ತಂಡದಿಂದ ‘ಮುದ್ದುಕೃಷ್ಣ ವೇಷ ಫೋಟೊ ಸ್ಪರ್ಧೆ’ ಆಯೋಜಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ರಂಜಿತ್ ಸುವರ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 10 ವರ್ಷದೊಳಗಿನ ಮಕ್ಕಳ ಕೃಷ್ಣ ವೇಷ ಫೋಟೋವನ್ನು ವಾಟ್ಸಪ್ ಮೂಲಕ (ಮೊ.ನಂ. 879 280 0059) ಆ. 24 ರೊಳಗೆ ಕಳುಹಿಸಬೇಕು. ಇದರಲ್ಲಿ ವಿಜೇತರು ವಿಶೇಷ ಬಹುಮಾನ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಯೋಗರಾಜ್ ಭಟ್ ಸೇರಿದಂತೆ ಇತರ ಸಿನೆಮಾ ಕ್ಷೇತ್ರದ ಪ್ರಮುಖರ ಜತೆಗೆ ಔತಣಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದ್ದಾರೆ ಎಂದರು. ‘ದೊಂಬರಾಟ’ ಚಿತ್ರ ಉತ್ತಮ ರೀತಿಯಲ್ಲಿ ಮೂಡಿಬಂದಿದ್ದು, ರಾಜ್ಯದ 100 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಈಗಾಗಲೇ ಚಿತ್ರದ ಧ್ವನಿಸುರುಳಿ 8,000ದಷ್ಟು ಮಾರಾಟವಾಗಿದ್ದು, ಟೂರ್ ಪ್ಯಾಕೇಜ್ ಕೂಡ ಪ್ರಕಟಿಸಲಾಗಿದೆ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕ ಅಮಿತ್ ರಾವ್, ನಟ ಉಮೇಶ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News