‘ಟ್ಯಾಲೆಂಟ್’ನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ

Update: 2016-08-15 06:09 GMT

ಮಂಗಳೂರು: ಆ.15: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ಜಂಟಿ ಆಶ್ರಯದಲ್ಲಿ 70ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಆಚರಿಸಲಾಯಿತು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಹಾಫಿಝ್ ಯಾಕೂಬ್ ಸಅದಿ ನಾವೂರು, ಸಾಮಾಜಿಕ ಕಾರ್ಯಕರ್ತ ರಘುವೀರ್ ಸೂಟರ್‌ಪೇಟೆ, ಮತ್ತು ಸಂತ ಅಂತೋನಿ ಸಂಸ್ಥೆಯ ಹಿರಿಯ ಧರ್ಮಗುರು ಫಾ/ಓಸ್ವಾಲ್ಡ್ ಲಸ್ರಾದೋ ಜೊತೆಯಾಗಿ ಧ್ವಜಾರೋಹಣಗೈದು ಸಂದೇಶ ನೀಡಿದರು. ಈ ಸಂದರ್ಭದಲ್ಲಿ ವಿಕಲಚೇತನ ಸಹೋದರ ಬಷೀರ್ ಮಂಗಳಪೇಟೆಯವರಿಗೆ ವ್ಯಾಪಾರ ನಡೆಸಲು ಗೂಡಂಗಡಿಯನ್ನು ಉಚಿತವಾಗಿ ವಿತರಿಸಲಾಯಿತು. ಟ್ಯಾಲೆಂಟ್ ಮೊಬೈಲ್ ಟೆಕ್ನೀಶಿಯನ್ ಕೋರ್ಸನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಅತಿಥಿಗಳು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ವಹಿಸಿದ್ದರು. ಟಿಆರ್‌ಎಫ್ ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ, ಬಿ.ಎ.ಅಕ್ಬರ್ ಅಲಿ, ಅಬ್ದುಸ್ಸಲಾಂ ಮುಸ್ಲಿಯಾರ್ ಪೆರ್ನೆ, ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ವ್ಯವಸ್ಥಾಪಕ ಯೂಸುಫ್, ವಿಶ್ವಾಸ್ ಕ್ರೌನ್ ಫ್ಲಾಟ್ ಓನರ್ಸ್‌ ಅಸೋಸಿಯೇಶನ್‌ನ ಕಾರ್ಯದರ್ಶಿ ಲೋಯ್ ಫ್ರಾಂಕ್, ಕೋಶಾಧಿಕಾರಿ ಅಮಾನುಲ್ಲಾ, ಅಬ್ದುಲ್ ಮಜೀದ್ ಗೋಲ್ಡ್ ಹೌಸ್, ನಿವೃತ್ತ ಮುಸ್ಲಿಮ್ ನೌಕರರ ಒಕ್ಕೂಟದ ರಶೀದ್, ಟಿಆರ್‌ಎಫ್ ಸದಸ್ಯರಾದ ಅಬ್ದುಲ್ ಮಜೀದ್ ತುಂಬೆ, ಮುಹಮ್ಮದ್ ಸ್ವರೂಪ್, ಆಸರ್ ವಿಮೆನ್ಸ್ ಫೌಂಡೇಶನ್‌ನ ಕಾರ್ಯದರ್ಶಿ ಮುಮ್ತಾಝ್ ಪಕ್ಕಲಡ್ಕ, ಉಪಾಧ್ಯಕ್ಷೆ ಆತಿಕಾ ರಫೀಕ್, ಸದಸ್ಯೆ ರೊಹರಾ ಉಳ್ಳಾಲ, ಅಫ್ರೀನಾ, ಶಂಶಾದ್ ಅಶ್ರಫ್, ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ನಾಸಿರ್ ಅಬ್ದುಲ್ಲಾ, ನಿಝಾಮ್, ಫರ್ವೇಝ್, ಶೈಲೇಶ್, ಅತಾವುಲ್ಲಾ, ಸುಲೈಮಾನ್, ರೇಗನ್, ವಿಶ್ವಾಶ್ ಕ್ರೇನ್ ಅಂಗಡಿ ಮಾಲಕರು ಮತ್ತು ಸಿಬ್ಬಂದಿ, ವಿಶ್ವಾಸ್ ಕ್ರೌನ್ ಮತ್ತು ವಿಶ್ವಾಸ್ ಪರ್ಲ್ ನಿವಾಸಿಗಳು ಉಪಸ್ಥಿತರಿದ್ದರು.

ಟಿಆರ್‌ಎಫ್ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿದರು. ಸದಸ್ಯ ಅಸ್ಪರ್ ಹುಸೈನ್ ಬೆಂಗರೆ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News