ಕಾರ್ನಾಡ್ ಮಸ್ಜಿದೇ ತೌಹೀದ್‌ನಲ್ಲಿ ಸಂಭ್ರಮದ ಸಾತಂತ್ರೋತ್ಸವ ಆಚರಣೆ

Update: 2016-08-15 08:06 GMT

ಮುಲ್ಕಿ, ಆ.15: ಕಾರ್ನಾಡ್ ಮಸ್ಜಿದೇ ತೌಹೀದ್ ವತಿಯಿಂದ ಮಸೀದಿ ವಠಾರದಲ್ಲಿ 70ನೆ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಜಮಾಅತ್ ಕಮಿಟಿ ಅಧ್ಯಕ್ಷ ಉಮರ್ ಫಾರೂಕ್ ಧ್ವಜಾರೋಹಣಗೈದರು.
 ಮೌಲವಿ ಅಬ್ದುಲ್ಲಾಹ್ ಉಮ್ರಿ ಮತ್ತು ಶರೀಫ್ ಕೊಳ್ನಾಡು ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಮಾಜಿ ಯೋಧ ಎಂ.ಬಿ.ಖಾನ್, ರಿಯಾಝ್ ಕಾರ್ನಾಡ್, ಶೇಕ್ ಮುಹಮ್ಮದ್ ಯೂಸುಫ್, ಶಬೀರ್ ಎಂ.ಎಚ್., ಜಬ್ಬಾರ್ ಕೊಳ್ನಾಡ್, ಅಶ್ರಫ್, ಬಾವಾಕ, ಮುಹಮ್ಮದ್ ಕೊಳ್ನಾಡ್, ಶಬ್ಬೀರ್ ನಾಲೂರು, ಕಲ್ಪಂಡೆ ಬಾವಾಕ, ಮೂಸಾ ಮೇಲ್ಮನೆ, ಇಸ್ಮಾಯೀಲ್ ಕೊಳ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಮುಹಿಯುದ್ದೀನ್ ಸ್ವಾಗತಿಸಿದರು. ಮುಖ್ತಾರ್ ಶೇಕ್ ವಂದಿಸಿದರು. ಶರೀಫ್ ಕೊಳ್ನಾಡ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News