ಕಾಮಿನಿ ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು

Update: 2016-08-16 18:24 GMT

ಪಡುಬಿದ್ರಿ, ಆ.16: ಹೆಜಮಾಡಿ ಮಟ್ಟಲಿವೆ ಎಂಬಲ್ಲಿರುವ ಕಾಮಿನಿ ಹೊಳೆಗೆ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.
ಮೃತರನ್ನು ಮಂಗಳೂರು ಕುಳಾಯಿ ನಿವಾಸಿ ಭಾಸ್ಕರ ಮೂಲ್ಯ(42) ಎಂದು ಗುರುತಿಸಲಾಗಿದೆ. ಇವರು ಇತರ ಐವರೊಂದಿಗೆ ವಿವಾಹಕ್ಕೆಂದು ಮಟ್ಟಲಿವೆಯ ಸಮುದ್ರ ಕಿನಾರೆ ಬಳಿ ಬಂದಿದ್ದರು. ಅಲ್ಲಿ ಊಟ ಮುಗಿಸಿ ಪಕ್ಕದಲ್ಲಿರುವ ಕಾಮಿನಿ ಹೊಳೆಗೆ ಕೈ ತೊಳೆಯಲು ಹೋದ ಭಾಸ್ಕರ್ ಮೂಲ್ಯ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದರು.
 ಕೂಡಲೇ ಅವರೊಂದಿಗೆ ಇದ್ದವರು ಅವರನ್ನು ಮೇಲಕ್ಕೆತ್ತಿ ಉಪಚರಿಸಿ ಆಸ್ಪತ್ರೆಗೆ ಕರೆದೊಯ್ದರು.ಆದರೆ ಅವರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News