ಪ್ರವೀಣ್ ಪೂಜಾರಿ ಹತ್ಯೆಗೆ ಮಾನವ್ ಸಮಾನತಾ ಮಂಚ್ ಖಂಡನೆ
Update: 2016-08-19 15:42 GMT
ಮಂಗಳೂರು, ಆ. 19: ಗೋ ರಕ್ಷಕರೆಂದು ಕರೆಸಿಕೊಳ್ಳುವ ಸಮಾಜವಿರೋಧಿ ಶಕ್ತಿಗಳು ಪ್ರವೀಣ್ ಪೂಜಾರಿ ಎಂಬವರನ್ನು ಬ್ರಹ್ಮಾವರದ ಕೊಕ್ಕರ್ಣೆ ಸಮೀಪದ ಕೆಂಜೂರು ಎಂಬಲ್ಲಿ ಹತ್ಯೆಗೈದಿರುವುದನ್ನು ಮಾನವ್ ಸಮಾನತಾ ಮಂಚ್ ತೀವ್ರವಾಗಿ ಖಂಡಿಸಿದೆ.
ಮೊದಲಿಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹಲ್ಲೆಗೈಯುತ್ತಿದ್ದ ಗೋರಕ್ಷಕರೆಂಬ ಗೋಮುಖ ವ್ಯಾಘ್ರರು ದಲಿತರ ಮೇಲೆ ಹಲ್ಲೆಗೈದು, ಈಗ ಬಿಲ್ಲವ ಸಮಾಜ ಬಾಂಧವರ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿರುವುದು ಆಡಳಿತ ಯಂತ್ರದ ಕಾರ್ಯ ನಿರ್ವಹಣೆಯ ಬಗ್ಗೆ ಪ್ರಶ್ನೆ ಮೂಡುತ್ತಿದೆ ಎಂದು ಸಂಘ ಹೇಳಿದೆ.
ಗೋರಕ್ಷಕರೆಂಬ ಸಂಘಟನೆ ಅಸ್ತಿತ್ವದಲ್ಲಿಲ್ಲದಿದ್ದರೂ ಮಾನವ ಹತ್ಯೆಯ ಸಂಘಟೆನಗಳು ಬೆಳೆದು ಬಂದಿರುವುದು ವಿಷಾದನೀಯ ಎಂದು ಸಂಘದ ಅಧ್ಯಕ್ಷ ಅಲಿ ಹಸನ್, ಪ್ರಧಾನ ಕಾರ್ಯದರ್ಶಿ ರೋಶನ್ ಪತ್ರಾವೊ, ಗೌರವಾಧ್ಯಕ್ಷ ವಸಂತ ಟೈಲರ್, ಕೋಶಾಧಿಕಾರಿ ಮುಹಮ್ಮದ್ ಸಾಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.