ಪ್ರಮುಖ ಆರೋಪಿ ಕಾಸರಗೋಡು ಪೊಲೀಸ್ ಕಸ್ಟಡಿಗೆ

Update: 2016-08-22 18:39 GMT

 ಕಾಸರಗೋಡು, ಆ.22: ಕ್ರೆಡಿಟ್ ಕಾರ್ಡ್ ಬಳಸಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಚ್ಚಿಯಲ್ಲಿ ಬಂತನಾಗಿದ್ದ ಪ್ರಮುಖ ಆರೋಪಿ ಕಾಸರಗೋಡು ತಳಂಗರೆಯ ಮುಹಮ್ಮದ್ ಸಾಬಿದ್(29)ನನ್ನು ಸೋಮವಾರ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಕಾಸರಗೋಡು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಈತ ಕಾಸರಗೋಡಿನಲ್ಲೂ ನಕಲಿ ಕ್ರೆಡಿಟ್ ಕಾರ್ಡ್ ಬಳಸಿ ಹಲವು ವಂಚನೆ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ಲಭಿಸಿತ್ತು. ಈ ಹಿನ್ನಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಕಾಸರಗೋಡು ಪೊಲೀಸರು ವಶಕ್ಕೆ ಪಡೆದು, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
  ಕಾಸರಗೋಡು ಚೌಕಿಯ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿ 10 ಸಾವಿರ ರೂ.ಗಳ ನಕಲಿ ಕ್ರೆಡಿಟ್ ಕಾರ್ಡ್ ನೀಡಿ ವಂಚಿಸಿದ್ದನು. ಪೆಟ್ರೋಲ್ ಬಂಕ್ ಮಾಲಕ ಲಕಿ್ಷ್ಮ
ೀ ನಾರಾಯಣ ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ಮತ್ತು ಪುಣೆಯಿಂದ ಈಗಾಗಲೇ ಆರು ಮಂದಿಯನ್ನು ಪೊಲೀಸರು ಬಂಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News