ಬಜಾಲ್ ರೈಲ್ವೆ ಕೆಳಸೇತುವೆ ರಸ್ತೆ ದುರಸ್ತಿಗೆ ಆಗ್ರಹಿಸಿ ಪಾದಯಾತ್ರೆ

Update: 2016-08-22 18:42 GMT

ಮಂಗಳೂರು, ಆ.22: ಪಡೀಲು ರೈಲ್ವೆ ಕೆಳಸೇತುವೆ ಮೂಲಕ ಬಜಾಲ್, ಜಲ್ಲಿಗುಡ್ಡೆ, ೈಸಲ್‌ನಗರ, ವಿಜಯ ನಗರ, ಅಳಪೆ ಪ್ರದೇಶಗಳಿಗೆ ಸಂಪ ರ್ಕಿಸುವ ರಸ್ತೆಯನ್ನು ಕೂಡಲೇ ಸರಿ ಪಡಿಸಲು ಒತ್ತಾಯಿಸಿ ಡಿವೈಎ್ಐ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪಾದಯಾತ್ರೆ ಮೆರವಣಿಗೆ ಸೋಮವಾರ ನಡೆಯಿತು. ಕೆಳಸೇತುವೆಯ ಅವೈಜ್ಞ್ಞಾನಿಕ ಕಾಮಗಾರಿ ನಡೆಸಿರುವ ಇಂಜಿನಿಯರ್‌ಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಪಡೀಲ್‌ನಿಂದ ಮಂಗಳೂರು ಮಹಾನಗರ ಪಾಲಿಕೆ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಮನಪಾ ಕಚೇರಿ ಎದುರು ಪ್ರತಿಭಟನೆ ನಡೆಸಿ ರೈಲ್ವೇ ಕೆಳಸೇತುವೆಯ ಅಸಮ ರ್ಪಕ ಕಾಮಗಾರಿಯಿಂದ ಉಂಟಾಗಿರುವ ತೊಂದರೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಡಿವೈಎ್ಐನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ , ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹಿರಿಯ ಮುಖಂಡರಾದ ಬಿ.ಎಂ. ಮಾಧವ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಸಾದಿಕ್ ಕಣ್ಣೂರು, ಪ್ರೇಮ್‌ನಾಥ್ ಜಲ್ಲಿಗುಡ್ಡೆ, ಬಶೀರ್ ಜಲ್ಲಿಗುಡ್ಡೆ, ಸುರೇಶ್ ಬಜಾಲ್, ಅನ್ಸಾರ್, ಶಾಂತಾ, ರೋಹಿಣಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News