ಪುತ್ತೂರು: ಜುಗಾರಿ ನಿರತರ ಬಂಧನ

Update: 2016-08-25 15:18 GMT

ಪುತ್ತೂರು,ಆ.25: ಜುಗಾರಿ ಅಡ್ಡೆಗೆ ಗುರುವಾರ ಸಂಜೆ ವೇಳೆಗೆ ದಾಳಿ ನಡೆಸಿದ ಪುತ್ತೂರು ನಗರ ಠಾಣೆ ಪೊಲೀಸರು ಆಟದಲ್ಲಿ ನಿರತರಾಗಿದ್ದ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾವು ಮಾಡ್ನೂರು ನಿವಾಸಿ ಮೋನಪ್ಪ ಮೂಲ್ಯ(40), ನರಿಮೊಗರು ಬಜಪ್ಪಳ ನಿವಾಸಿ ಜಗದೀಶ್(20), ನಿಡ್ಪಳ್ಳಿಯ ಗೋಳಿತ್ತಡಿ ನಿವಾಸಿ ಉಮೇಶ್(28), ಕೆಮ್ಮಿಂಜೆ ಗ್ರಾಮದ ಕೊರುಂಗು ನಿವಾಸಿ ವಿನೋದ್(25) ಬಂಧಿತ ಆರೋಪಿಗಳು. ಬಂಧಿತರಿಂದ ಆಟಕ್ಕೆ ಬಳಸಲಾದ ರೂ. 10,080 ನಗದು ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ನಗರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸ್ಕರಿಯ, ಪಿಸಿಗಳಾದ ಪ್ರಶಾಂತ್ ರೈ, ಪ್ರಶಾಂತ್ ಶೆಟ್ಟಿ, ಉದಯ, ಶರೀಫ್, ಜಯರಾಮ, ಚೋಳಪ್ಪ ಸಂಶಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News