ಕಿನ್ಯ: ಪಡಿತರ ಕೂಪನ್ ವಿತರಣಾ ಕೇಂದ್ರ ಉದ್ಘಾಟನೆ

Update: 2016-09-02 10:25 GMT

ಉಳ್ಳಾಲ, ಸೆ.2:ಕಿನ್ಯಗ್ರಾಮದ ಬೆಳರಿಂಗೆ ಜಂಕ್ಷನ್‌ನಲ್ಲಿ ಆರಂಭಿಸಲಾದ ಕರ್ನಾಟಕ ಸರಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಕೂಪನ್ ವಿತರಣಾ ಕೇಂದ್ರವನ್ನು ಸಾಮಜಿಕ ಮುಂದಾಳು ಜಮಾಅತ್ ಅಧ್ಯಕ್ಷ ಹಾಜಿ ಹುಸೈನ್ ಉದ್ಘಾಟಿಸಿದರು.

ಈ ಸಂದರ್ಭ ಗ್ರಾಮಸ್ಥರ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ರಿಗೆ ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿರಾಜುದ್ದೀನ್ ಕಿನ್ಯ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಕಿನ್ಯಗ್ರಾ.ಪಂ. ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಸಿರಾಜುದ್ದಿನ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ತಾಲೂಕು ಪಂಚಾಯತ್ ಸದಸ್ಯರಾದ ಸಿದ್ದೀಕ್ ತಲಪಾಡಿ, ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಫಾರೂಕ್, ಮಹಾಬಲ ಪೂಂಜ, ಮುಹಮ್ಮದ್, ಅಬುಸಾಲಿ, ಹಮೀದ್,ಅಶಾಲತಾ, ಕುಸುಮಾ,ಭಾಗಿ, ಅಸ್ಯಮ್ಮ, ಸಾದು ಕುಂಞಿ ಮಾಸ್ಟರ್, ಅಬುಸಾಲಿ ಹಾಜಿ, ಸಾದುಕುಂಞ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು. ಹಂಝ ಕಿನ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News