ಅ.16ರಂದು ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ

Update: 2016-10-12 18:38 GMT

ಮಂಗಳೂರು, ಅ.12: ದೇರಳಕಟ್ಟೆ ರೋಟರಿ ಕ್ಲಬ್‌ನ ನೇತೃತ್ವದಲ್ಲಿ ವಲಯ 2 ಹಾಗೂ 3ರ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವು ಅ.16ರಂದು ಬೆಳಗ್ಗೆ 9ಕ್ಕೆ ಉರ್ವ ಕೆನರಾ ಹೈಸ್ಕೂಲ್‌ನಲ್ಲಿ ನಡೆಯಲಿದೆ.
ರೋಟರಿ ಮಾಜಿ ಗವರ್ನರ್ ಕೃಷ್ಣ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ರೋಟರಿಯ ರೋಹಿನಾಥ್, ವಿನಾಯಕ ಪ್ರಭು ಮತ್ತು ಡಾ.ಪ್ರಶಾಂತ್ ಭಾಗವಹಿಸಲಿದ್ದಾರೆ ಎಂದು ಕ್ಲಬ್‌ನ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಗೀತ ವಿಭಾಗದಲ್ಲಿ ನೃತ್ಯದಲ್ಲಿ ವೈಯಕ್ತಿಕ ಹಾಗೂ ಸಮೂಹ, ಕಿರುನಾಟಕ ಹಾಗೂ ಮೂಕಪಾತ್ರ ಅಭಿನಯ ಸ್ಪರ್ಧೆಗಳು ನಡೆಯಲಿವೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸೂರ್ಯಪ್ರಕಾಶ್ ಭಟ್, ಡಾ.ದೇವದಾಸ್ ರೈ ಹಾಗೂ ಸಂತೋಷ್ ಐತಾಳ್, ವಲಯ 14ರ ರೋಟರಿ ಕ್ಲಬ್‌ನ ಸದಸ್ಯರು ಹಾಗೂ ಕುಟುಂಬಸ್ಥರು ಈ ಕಾರ್ಯಕ್ರಮದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
3ರ ಸಹಾಯಕ ಗವರ್ನರ್ ವಿಕ್ರಮ್ ದತ್ತ್, ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಎನ್.ಟಿ.ರಾಮಕೃಷ್ಣ ನಾಯ್ಕ, ಪಿ.ಡಿ.ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News