ಕವಿಕಾವ್ಯ ಮೇಳಕ್ಕೆ ಕವನ ಆಹ್ವಾನ

Update: 2016-10-12 18:39 GMT

ಮಂಡ್ಯ, ಅ.12: ಡಾ.ಜೀಶಂಪ ಸಾಹಿತ್ಯ ವೇದಿಕೆ ಮಂಡ್ಯ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಮಂಡ್ಯ ಇವುಗಳ ಜಂಟಿ ಆಶ್ರಯದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ 20ನೆ ವರ್ಷದ ರಾಜ್ಯ ಮಟ್ಟದ ಕವಿಕಾವ್ಯ ಮೇಳಕ್ಕೆ ಕವನಗಳನ್ನು ಆಹ್ವಾನಿಸಿದೆ.
ಆಯ್ಕೆಯಾದ ಉತ್ತಮ ನೂರು ಕವನಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಅತ್ಯುತ್ತಮ 25 ಕವನಗಳಿಗೆ ಕಾವ್ಯಶ್ರೀ ಪ್ರಶಸ್ತಿ ನೀಡಲಾಗುವುದು.
 ಆಸಕ್ತರು ಒಂದು ಕವಿತೆ, ಫೋಟೊ, ವಿಳಾಸ, ಮೊ.ನಂ. ಒಳಗೊಂಡ ಕಿರುಪರಿಚಯದೊಂದಿಗೆ ನ.30ರೊಳಗೆ ಎಸ್.ಕೃಷ್ಣ ಸ್ವರ್ಣಸಂದ್ರ, ಅಧ್ಯಕ್ಷರು ಡಾ.ಜೀ.ಶಂ.ಪ. ಸಾಹಿತ್ಯ ವೇದಿಕೆ, ಕವಿಮಿತ್ರ, ನಂ.767 ಸ್ವರ್ಣಸಂದ್ರ, ಮಂಡ್ಯ-2 ಇಲ್ಲಿಗೆ ಕಳುಹಿಸಬಹುದು. ಮಾಹಿತಿಗಾಗಿ ಮೊ.ನಂ.:9448424380ರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News