ಶ್ರೀಮಾತಾ ಲಕ್ಷಣಿ ಶಾಂತಿಧಾಮಕ್ಕೆ ನೆರವು

Update: 2016-10-12 18:40 GMT

ಕಾರ್ಕಳ, ಅ.12: ಗ್ರೂಪ್ ಜಿಎಸ್‌ಬಿ ಹೆಲ್ಪ್‌ಲೈನ್ ಚಾರಿಟೇಬಲ್ ಟ್ರಸ್ಟ್‌ನಿಂದ 25 ಸಾವಿರ ರೂ. ಸಹಾಯಧನವನ್ನು ಮೇರಮಜಲಿನ ಶ್ರೀಮಾತಾ ಲಕ್ಷಣಿ ಶಾಂತಿಧಾಮ ವೃದ್ಧಾಶ್ರಮದ ಸೇವಾ ಕಾರ್ಯಗಳಿಗೆ ಇತ್ತೀಚೆಗೆ ಹಸ್ತಾಂತರಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಪ್ರಮೋದ್ ಜಿ. ಕಾಮತ್, ಶ್ರೀಮಾತಾ ಲಕ್ಷಣಿ ಶಾಂತಿಧಾಮದ ಸ್ಥಾಪಕಾಧ್ಯಕ್ಷ ಕಾಂತಾಡಿಗುತ್ತು ಹರೀಶ್ ಪೆರ್ಗಡೆ, ಕಾರ್ಕಳದ ಹೊಸಸಂಜೆ ಬಳಗದ ಅಧ್ಯಕ್ಷ ಆರ್.ದೇವರಾಯ ಪ್ರಭು ಹಾಗೂ ಸಮಾಜ ಸೇವಕ ವಿಶ್ವನಾಥ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News