ಸಿಪಿಎಂ ಕಾರ್ಯಕರ್ತನ ಕೊಲೆ ಪ್ರಕರಣ : ಇಬ್ಬರು ಆರೆಸ್ಸೆಸ್ ಕಾರ್ಯಕರ್ತರ ಸೆರೆ

Update: 2016-10-13 18:48 GMT

ಕಾಸರಗೋಡು, ಅ.13: ಸಿಪಿಎಂ ಕಾರ್ಯಕರ್ತ ಮೋಹನ್ ಎಂಬವರ ಕೊಲೆಗೆ ಸಂಬಂಧಪಟ್ಟಂತೆ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀ ಸರು ಬಂಧಿಸಿದ್ದಾರೆ. ಬಂಧಿತರನ್ನು ಕೂತುಪರಂಬ ಪಾದಿರಿಯಾಡ್‌ನ ರೂಪೇಶ್ ಮತ್ತು ರಾಹುಲ್ ಎಂದು ಗುರುತಿಸಲಾಗಿದೆ.

ಇವರನ್ನು ಕಣ್ಣೂರಿನ ಆರೆಸ್ಸೆಸ್ ಕಾರ್ಯಾಲಯದಿಂದ ಬಂಧಿಸಲಾ ಯಿತು. ಆರೋಪಿಗಳು ತಪ್ಪಿಸಿ ಪರಾರಿ ಯಾಗಲು ಯತ್ನಿಸಿದರೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ಈ ಕೃತ್ಯದಲ್ಲಿ ಏಳು ಮಂದಿ ಶಾಮೀ ಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಿಪಿಎಂ ವಲಯ ಕಾರ್ಯದರ್ಶಿ ಯಾಗಿದ್ದ ಮೋಹನ್ ಶೇಂದಿ ಅಂಗಡಿಯಲ್ಲಿ ಕಾರ್ಮಿಕರಾಗಿದ್ದರು. ಹಾಡಹಗಲೇ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮಾರಕಾಯುಧದಿಂದ ಮೋಹನ್‌ರನ್ನು ಕೊಲೆಗೈದು ಪರಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News