ಜೆಡಿಎಸ್ ಕಾರ್ಯಕರ್ತರ ಸಮಾವೇಶ

Update: 2016-10-17 13:11 GMT

ಉಡುಪಿ, ಅ.17: ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಕಾರ್ಯಕರ್ತರ ಸಮಾವೇಶವನ್ನು ರವಿವಾರ ಉಡುಪಿಯ ಸ್ವದೇಶಿ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಮಾವೇಶವನ್ನು ಉದ್ಘಾಟಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮಾತನಾಡಿ, ಸದಸ್ಯತ್ವ ಕಾರ್ಯವನ್ನು ಜಿಲ್ಲೆಯಲ್ಲಿ ಚುರುಕು ಗೊಳಿಸಬೇಕು. 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು.

ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಫೀಯುಲ್ಲಾ ಸಾಹೇಬ್, ಜೆಡಿಎಸ್ ಜಿಲ್ಲಾಧ್ಯಕ್ಷ ದಕ್ಷತ್ ಆರ್.ಶೆಟ್ಟಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಲಿನಿ ಶೆಟ್ಟಿ ಕೆಂಚನೂರು ಮಾತನಾಡಿದರು.

ಜೆಡಿಎಸ್ ಮುಖಂಡರಾದ ವಾಸುದೇವ ರಾವ್, ದಿಲ್ಲೇಶ್ ಶೆಟ್ಟಿ ಬೆಳ್ಳಂಪಳ್ಳಿ, ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ಯೋಗಿಶ್ ಶೆಟ್ಟಿ, ಬಿ.ಟಿ.ಮಂಜುನಾಥ್, ಗಂಗಾಧರ ಭಂಡಾರಿ ಬಿರ್ತಿ, ಸತೀಶ್ ಪೂಜಾರಿ ಹೆಜಮಾಡಿ, ಜಯಂತ್ ಹೆಗ್ಡೆ, ರಾಜೇಶ್ ಆದಿಉಡುಪಿ, ಅಶೋಕ್ ಬೈಲಕೆರೆ, ದಿವಾಕರ ಕುಕ್ಕಿಕಟ್ಟೆ, ಸಚಿನ್ ಜೆ.ಎ., ವೇದಾವತಿ ಶೆಟ್ಟಿ, ಅರುಣಾ ಕಿಣಿ ಉಪಸ್ಥಿತರಿದ್ದರು.

ನಾಗರಾಜ ಭಟ್ ಸ್ವಾಗತಿಸಿದರು. ಅಣ್ಣಯ್ಯ ನಾಯ್ಕಾ ಪಟ್ಲ ಪ್ರಾಸ್ತಾವಿಕ ವಾಗಿ ಮಾತನಾಡಿದರು. ರಮೇಶ್ ಕುಂದಾಪುರ ವಂದಿಸಿದರು. ವಿಶ್ವನಾಥ ಬೆಳಪು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News