ಕುಬೆವೂರು ಬಳಿ ಕಾರು ರಿಕ್ಷಾ ನಡುವೆ ಢಿಕ್ಕಿ

Update: 2016-10-19 17:50 GMT

ಮುಲ್ಕಿ, ಅ.19: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕುಬೆವೂರು ಬಳಿಯಲ್ಲಿ ರಿಕ್ಷಾ ಮತ್ತು ಆಲ್ಟೋ ಕಾರು ಢಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಕಿನ್ನಿಗೋಳಿ ಕಡೆಯಿಂದ ಮೂಲ್ಕಿ ಕಡೆಗೆ ಬರುತ್ತಿದ್ದ ರಿಕ್ಷಾಗೆ ಮೂಲ್ಕಿ ಕಡೆಯಿಂದ ಕಿನ್ನಿಗೋಳಿಯ ಸಚ್ಚೇರಿಪೇಟೆ ಕಡೆಗೆ ಹೊಗುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಈ ಸಂದರ್ಭ ರಿಕ್ಷಾ ಹಿಂದುಗಡೆ ಬರುತ್ತಿದ್ದ ಲಾರಿ ಕೂಡ ಸಣ್ಣ ಮಟ್ಟಿಗೆ ಅಪಘಾತಕ್ಕೀಡಾಗಿದೆ. ಅಪಘಾತದ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿದ್ದು ಚರಂಡಿಗೆ ಬಿದ್ದ ರಿಕ್ಷಾವನ್ನು ಮೇಲೆ ತೆಗೆಯಲು ತ್ರಾಸಪಡಬೇಕಾಯಿತು.

ರಿಕ್ಷಾ ಚಾಲಕ ಮುಲ್ಕಿ ನಿವಾಸಿ ಸುಖೇಶ್ ಹಾಗೂ ಕಾರು ಚಾಲಕ ಸಚ್ಚೆರಿಪೇಟೆ ನಿವಾಸಿ ನರಸಿಂಹ ಭಂಡಾರ್‌ಕರ್ ಹಾಗೂ ಲಾರಿ ಚಾಲಕ ರಘು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಅಪಘಾತದಿಂದ ಕೆಲ ಹೊತ್ತು ಕಿನ್ನಿಗೋಳಿ ರಾಜ್ಯ ಹೆದ್ದಾರಿ ಅಸ್ತವ್ಯಸ್ತಗೊಂಡಿದ್ದು ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಹೆದ್ದಾರಿ ಸಂಚಾರ ಮುಕ್ತಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News