ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2016-10-21 16:24 GMT

ಹಿರಿಯಡ್ಕ, ಅ.21: ವೈಯಕ್ತಿಕ ಕಾರಣದಿಂದ ಮನನೊಂದ ಆತ್ರಾಡಿ ಮದಗ ನಿವಾಸಿ ಅಣ್ಣಯ್ಯ ನಾಯ್ಕಾ ಎಂಬವರ ಮಗ ನಾಗೇಶ್(38) ಎಂಬವರು ಅ.21ರಂದು ಬೆಳಗ್ಗೆ ಮನೆಯ ಮಹಡಿಯ ಮೆಟ್ಟಲಿನ ರೈಲಿಂಗ್ ಸೆಟ್ಟಿನ ರಾಡ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ:ತನ್ನ ಕಣ್ಣುಗಳಿಗೆ ನಡೆಸಿದ ಶಸ್ತ್ರ ಚಿಕಿತ್ಸೆಯ ನಂತರ ಎರಡೂ ಕಣ್ಣುಗಳು ಸರಿಯಾಗಿ ಕಾಣದೆ ಇರುವುದರಿಂದ ಮಾನಸಿಕವಾಗಿ ನೊಂದ ಯಡ್ತಾರೆ ಗ್ರಾಮದ ಅಕ್ಕಯ್ಯ(63) ಎಂಬವರು ಅ.20ರಂದು ರಾತ್ರಿ ವೇಳೆ ಮನೆಯ ಹಿಂಬಂದಿಯ ದನದ ಕೊಟ್ಟಿಗೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News