ಅ.30: ಕದ್ರಿ ಕ್ರಿಕೆಟರ್ಸ್‌ನಿಂದ ‘ಸ್ಟಾರ್ ನೈಟ್-2016’ ಕಾರ್ಯಕ್ರಮ

Update: 2016-10-22 18:10 GMT

ಮಂಗಳೂರು,ಅ.22: ನಗರದ ಕದ್ರಿ ಕ್ರಿಕೆಟರ್ಸ್‌ ವತಿಯಿಂದ ದೀಪಾವಳಿ ಪ್ರಯುಕ್ತ ಅ.30ರಂದು ಸಂಜೆ 6:30ಕ್ಕೆ ಕದ್ರಿ ಮೈದಾನದಲ್ಲಿ 9ನೆ ವರ್ಷದ ‘ಸ್ಟಾರ್ ನೈಟ್-2016’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಮನೋಹರ ಶೆಟ್ಟಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಟರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದು, ಮಣಿಕಾಂತ್ ಕದ್ರಿಯವರಿಂದ ಲೈವ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
 ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕರಾದ ಸುಪ್ರಿಯಾ ಲೋಹಿತ್, ಸಂತೋಷ್ ವೆಂಕಿ, ನಕುಲ್ ಅಭಯಂಕರ್, ಸರಿಗಮಪ ಖ್ಯಾತಿಯ ಶ್ರೀರಾಮ್ ಕಾಸರ್, ಅರ್ಜುನ್ ಕಾಪಿಕಾಡ್, ಝೀ ಕನ್ನಡ ಡ್ರಾಮಾ ಜ್ಯೂನಿಯರ್ಸ್‌ ಪ್ರಶಸ್ತಿ ವಿಜೇತೆ ಚಿತ್ರಾಲಿ ಭಾಗವಹಿಸಲಿದ್ದಾರೆ. ಈ ಸಂದರ್ಭ ನಿವೃತ್ತ ಯೋಧ ಕುಂದಾಪುರದ ಪಿ.ಬಿ.ಜೋಶಿ, ನಿರೂಪಕಿ ಅನುಶ್ರೀ ಹಾಗೂ ತುಳುಚಿತ್ರ ರಂಗದ ಖ್ಯಾತ ಕಲಾವಿದರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕದ್ರಿ ಕ್ರಿಕೆಟರ್ಸ್‌ನ ಪದಾಧಿಕಾರಿಗಳಾದ ಮೋಹಿತ್ ಎನ್., ಚೇತನ್, ಸಂದೀಪ್, ಅವಿನಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News