ಮುಳ್ಳುಹಂದಿ ಬೇಟೆ: ಆರೋಪಿಗಳ ಬಂಧನ

Update: 2016-10-25 18:48 GMT

ಉಪ್ಪಿನಂಗಡಿ, ಅ.25: ಅಕ್ರಮವಾಗಿ ಸರಕಾರಿ ರಕ್ಷಿತಾರಣ್ಯಕ್ಕೆ ನುಗ್ಗಿ ಮುಳ್ಳುಹಂದಿ ಯನ್ನು ಬೇಟೆಯಾಡಿದ ತಂಡವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿದ್ದಾರೆ. ಬಂಧಿತರಿಂದ ಬೇಟೆಯಾಡಿದ ಮುಳ್ಳುಹಂದಿ ಸಹಿತ ಕೋವಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶಿಬಾಜೆಯ ಅಬ್ರಾಹಂ, ಶಿರಾಡಿ ಅಡ್ಡಹೊಳೆಯ ಬಾಳಪ್ಪ ಹಾಗೂ ಕೊರಗಪ್ಪಬಂಧಿತ ಆರೋಪಿಗಳು. ಇವರು ಶಿರಾಡಿ-ಶಿಬಾಜೆ ರಕ್ಷಿತಾರಣ್ಯಕ್ಕೆ ನುಗ್ಗಿ ಬೇಟೆಯಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳವಾರ ನಸುಕಿನ ಜಾವ ಅರಣ್ಯಾಧಿಕಾರಿಗಳ ತಂಡ ದಾಳಿನಡೆಸಿ ಆರೋಪಿಗಳ ಸಹಿತ ಕೋವಿ ಹಾಗೂ ಮುಳ್ಳುಹಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಸಂಧ್ಯಾ ಅವರ ನಿರ್ದೇಶನದಂತೆ ದಾಳಿ ನಡೆಸಿದ ತಂಡದಲ್ಲಿ ಅರಣ್ಯಾಧಿಕಾರಿಗಳಾದ ಜಯಕುಮಾರ್, ಯಶೋಧರ್, ಲಿಂಗರಾಜು, ಪರಮೇಶ್ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News