ಮನೆಗೆ ನುಗ್ಗಿ ತಂಡದಿಂದ ಹಲ್ಲೆ: ದೂರು

Update: 2016-10-31 18:43 GMT

ಮಂಗಳೂರು, ಅ.31: ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬರ ಮೇಲೆ ನಾಲ್ವರ ತಂಡ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿ 2,400 ರೂ. ನಗದು ಹಾಗೂ ಮೊಬೈಲ್ ಫೋನ್ ಕದ್ದೊಯ್ದ ಪ್ರಕರಣ ಕಾಟಿಪಳ್ಳ ಗ್ರಾಮದ ಕೈಕಂಬ ಚರ್ಚ್ ರೋಡ್‌ನಲ್ಲಿ ನಡೆದಿದೆ.

ಬೈಕ್ ಹಾಗೂ ಕಾರ್‌ನಲ್ಲಿ ಬಂದ ಈ ತಂಡ ಹರ್ಮನ್ ಡಿಸೋಜ ಎಂಬವರ ಬಾಡಿಗೆ ಮನೆಯಲಿದ್ದ ಸೋನು ಎಂಬವರ ಮನೆಯೊಳಗೆ ನುಗ್ಗಿ ಈ ಕೃತ್ಯ ಎಸಗಿ ಪರಾರಿಯಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News