ಜಯ ಕರ್ನಾಟಕದಿಂದ ಯೋಧರ ಮನೆಯಲ್ಲಿ ದೀಪಾವಳಿ
ಉಡುಪಿ, ನ.1: ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಹುತಾತ್ಮರಾದ ಹಿರಿಯಡ್ಕ ಗ್ರಾಮದ ಕೊಂಡಾಡಿಯ ಮಹಾಬಲ ಸುವರ್ಣರ ಮನೆಯಲ್ಲಿ ರವಿವಾರ ಅವರ ಕುಟುಂಬದವರೊಂದಿಗೆ ದೀಪಾವಳಿಯನ್ನು ಆಚರಿಸಿದರು.
ಜಯಕರ್ನಾಟಕದ ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಯೋಧರ ಮನೆಯಲ್ಲಿ ಸಾಲು ದೀಪಗಳನ್ನು ಬೆಳಗಿಸಿ, ಪಟಾಕಿ ಸಿಡಿಸಿ, ಸಿಹಿತಿಂಡಿಯನ್ನು ವಿತರಿಸಿ ಯೋಧ ಮಹಾಬಲ ಸುವರ್ಣರ ಪತ್ನಿ ಕಲಾವತಿ, ಮಕ್ಕಳಾದ ಶ್ರೀಧರ್, ಗಿರೀಶ್, ರಾಕೇಶ್ ಅವರಿಗೆ ಉಡುಗೊರೆಯನ್ನಿತ್ತು ಹಬ್ಬದ ಶುಭಾಶಯ ಹೇಳಿ ಸಂಭ್ರಮಿಸಲಾಯಿತು.
ಜಯಕರ್ನಾಟಕ ಉಡುಪಿ ತಾಲೂಕು ಅಧ್ಯಕ್ಷ ನಿರಂಜನ ಹೆಗ್ಡೆ ಅಲ್ತಾರು, ಬೆಂಗಳೂರು ಜಯಕರ್ನಾಟಕದ ಹೊಟೇಲು ಸಂಘದ ಕಾರ್ಯದರ್ಶಿ ಕಿರಣ್ ಕುಮಾರ್, ಜಿಲ್ಲಾ ಪ್ರಧಾನ ಸಂಚಾಲಕ ಅಣ್ಣಪ್ಪ ಕುಲಾಲ್ ಹೆಬ್ರಿ, ಎಸ್.ಎಸ್.ತೋನ್ಸೆ ಮಾತನಾಡಿದರು.
ಮಾಜಿ ಸೈನಿಕರ ವೇದಿಕೆಯ ನಿರ್ದೇಶಕ ಕೆ.ಡೊರೊಸುಯಾ, ಕಾರ್ಯ ನಿರ್ವಹಣಾಧಿಕಾರಿ ಗಣೇಶ ರಾವ್, ಕೃಷ್ಣ ಆಚಾರ್ಯ, ಹರಿಣಾಕ್ಷ, ರಘು ಕರ್ಜೆ, ಜಯಕರ್ನಾಟಕ ಮಣಿಪಾಲ ಘಟಕದ ಅಧ್ಯಕ್ಷ ಲೂವಿಸ್ ಎಂ., ಪ್ರಕಾಶ್, ಗಣೇಶ್ರಾಜ್ ಸರಳೇಬೆಟ್ಟು, ರಾಘು ಕೊಳಗುಡ್ಡೆ ಹೆಬ್ರಿ ಉಪಸ್ಥಿತರಿದ್ದರು. ಜಿಲ್ಲಾ ಗೌರವ ಸಲಹೆಗಾರ ಸುಧಾಕರ ರಾವ್ ಬಾರಕೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು.