ಕಾರು ಚಾಲಕನಿಗೆ ತಲವಾರಿನಿಂದ ಹಲ್ಲೆ

Update: 2016-11-04 16:32 GMT

ಕುಂದಾಪುರ, ನ.4: ಕಂಡ್ಲೂರಿನ ಜೆ.ಎಂ.ರಸ್ತೆಯ ಹೊಳೆ ಕಡುದಾರಿ ಬಳಿ ನ.3ರಂದು ರಾತ್ರಿ ವೇಳೆ ತಂಡವೊಂದು ಕಾರು ಚಾಲಕರೊಬ್ಬರಿಗೆ ತಲವಾರಿ ನಿಂದ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಹಲ್ಲೆಗೊಳಗಾದವರನ್ನು ಕಂಡ್ಲೂರಿನ ಕಾರಾಣಿ ಶಾಹಿದ್(26) ಎಂದು ಗುರುತಿಸಲಾಗಿದೆ. ಇವರು ಸ್ನೇಹಿತರೊಂದಿಗೆ ನಿಂತುಕೊಂಡಿರುವಾಗ ಅಲ್ಲಿಗೆ ಬಂದ ಜುಮ್ಮಿ ಜಿಪ್ರೀ, ಸದಾಕತ್, ಕಾಜಿ ಅಫ್ತಾಬ್ ಮತ್ತು ನಿಸಾರ್ ಎಂಬವರು ಅವಾಚ್ಯವಾಗಿ ಬೈದು, ನಿನ್ನನ್ನು ಹಾಗೂ ನಿನ್ನ ಅಣ್ಣನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಎಂದು ಹೇಳಿ, ತಲವಾರಿನಿಂದ ತಲೆ ಹೊಡೆದು ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News