ಎಸ್.ಕೆ.ಎಸ್.ಎಂ. ಯೂತ್ ವಿಂಗ್ ಸದಸ್ಯರ ಕೂಟ
Update: 2016-11-08 04:46 GMT
ಮಂಗಳೂರು, ನ.8: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಯೂತ್ ವಿಂಗ್ವತಿಯಿಂದ ಸದಸ್ಯರ ಕೂಟ ಇತ್ತೀಚೆಗೆ ನಗರದ ದಾರುಲ್ ಖೈರ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಸ್ತಾದ್ ಮುಸ್ತಫಾ ದಾರಿಮಿ ‘ಇಸ್ಲಾಮಿನಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ನೀಡಿದರು. ಇಂಝಾಮ್ ಪ್ರಾಸ್ತಾವಿಕ ಭಾಷಣೆ ಮಾಡಿದರು. ಮೂಸ ಫಾಝಿಲ್ ಕುದ್ರೋಳಿ ಸ್ವಾಗತಿಸಿ, ಕುರ್ಆನ್ ಸಂದೇಶ ಪ್ರಚಾರ ಅಭಿಯಾನದ ಬಗ್ಗೆ ಮಾತನಾಡಿದರು.
ಸೌತ್ ಕರ್ನಾಟಕ ಸಲಫಿ ಮೂನ್ಮೆಂಟ್ನ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ಎಸ್.ಕೆ.ಎಸ್.ಎಂ. ಯೂತ್ ವಿಂಗ್ನ ಇಬ್ರಾಹೀಂ ನೌಶಾದ್, ಇಂಝಾಮ್, ಮುಝಮ್ಮಿಲ್, ಫಾಝಿಲ್ ಕುದ್ರೋಳಿ ಉಪಸ್ಥಿತರಿದ್ದರು.