ಎಸ್ಇಡಿಸಿ ಸ್ಫಟಿಕ ಸಂಭ್ರಮ: ಬೋಳಂತೂರಿನಲ್ಲಿ ರೇಂಜ್ ಕಾನ್ಫರೆನ್ಸ್
ಬಂಟ್ವಾಳ, ನ.8: ಎಸ್ಇಡಿಸಿ ಸ್ಫಟಿಕ ಸಂಭ್ರಮದ ಪ್ರಯುಕ್ತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ನ ಬೋಳಂತೂರು ರೇಂಜ್ ಹಾಗೂ ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಬೋಳಂತೂರು ರೀಜನಲ್ ಸಮಿತಿಯು ಹಮ್ಮಿಕೊಂಡ ರೇಂಜ್ ಕಾನ್ಫರೆನ್ಸ್ ಸಂಭ್ರಮದ ತೆರೆಬಿತ್ತು.
ಬೋಳಂತೂರು ಖುವ್ವತುಲ್ ಇಸ್ಲಾಮ್ ಮದ್ರಸದಲ್ಲಿ ನಡೆದ ಮುಅಲ್ಲಿಮ್ ಸೆಮಿನಾರ್ ಹಾಗೂ ಮ್ಯಾನೇಜ್ಮೆಂಟ್ ಮೀಟ್ನಲ್ಲಿ ಎಸ್ಇಡಿಸಿ ಸದಸ್ಯ ಇಬ್ರಾಹೀಂ ನಈಮಿ ವಿಷಯ ಮಂಡಿಸಿದರು.
ಬಳಿಕ ಆಕರ್ಷಕ ಎಸ್ಬಿಎಸ್ ‘ಬಾಲಮುನ್ನಡೆ’ ರ್ಯಾಲಿಯು ಕೊಕ್ಕಪುಣಿಯಿಂದ ಎನ್.ಸಿ.ರೋಡ್ ಜಂಕ್ಷನ್ ತನಕ ನಡೆಯಿತು.
ಸಮಾರೋಪ ಸಮಾರಂಭವನ್ನು ಜಿಲ್ಲಾ ಜಂಇಯ್ಯತುಲ್ ಉಲಮಾದ ಕಾರ್ಯದರ್ಶಿ ಅಶ್ ಅರಿಯಾ ಮುಹಮ್ಮದಲಿ ಸಖಾಫಿ ಉದ್ಘಾಟಿಸಿದರು.
ರೇಂಜ್ ಅಧ್ಯಕ್ಷ ಹಮೀದ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಹುಸೈನ್ ಮುಈನಿ ಅಲ್ ಅಹ್ಸನಿ ಮೂಡುಬಿದಿರೆ ಮುಖ್ಯ ಭಾಷಣಗೈದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ಶುಭ ಹಾರೈಸಿದರು. ಸುಲೈಮಾನ್ ಮುಸ್ಲಿಯಾರ್ ನಾರ್ಶ ದುಅ ಮಾಡಿದರು.
ಸೈಯದ್ ಮುಝಮ್ಮಿಲ್ ತಂಙಳ್, ಎಸ್.ಎಂ.ಎ.ರೀಜನಲ್ ಅಧ್ಯಕ್ಷ ಸಿ.ಎಚ್.ಅಬೂಬಕರ್ ಸೆರ್ಕಳ, ಎಸ್ವೈಎಸ್ ನಾಯಕ ಮುತ್ತಲಿಬ್ ಹಾಜಿ ಕೆ.ಪಿ.ಬೈಲು, ಸಿಂಗಾರಿ ಸುಲೈಮಾನ್ ಹಾಜಿ, ಗ್ರಾಪಂ ಸದಸ್ಯರಾದ ಯಾಕೂಬ್ ದಂಡೆಮಾರ್, ಬೋಳಂತೂರು ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷ ಹಮೀದ್ ನಾಡಾಜೆ, ಬೋಳಂತೂರು ಖತೀಬ್ ಅಬ್ದುರ್ರಹ್ಮಾನ್ ಸಖಾಫಿ, ಅಬ್ದುಲ್ ಖಾದರ್ ಮುಸ್ಲಿಯಾರ್ ನಾರ್ಶ, ಅಬ್ದುಲ್ಲತೀಫ್ ಸಖಾಫಿ ಕೆ.ಪಿ.ಬೈಲು, ಅಶ್ರಫ್ ಸಅದಿ ಸೆರ್ಕಳ, ಅಬ್ದುರ್ರಹ್ಮಾನ್ ಸಖಾಫಿ ತಾಳಿತ್ತನೂಜಿ, ಅಬ್ದುರ್ರಹ್ಮಾನ್ ಅಮ್ಜದಿ ಅಮ್ಟೂರು, ಅಬ್ದುರ್ರಹ್ಮಾನ್ ಸಖಾಫಿ ಬಾರೆಬೆಟ್ಟು, ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ನಾಯಕ ಅಕ್ಬರ್ ಅಲಿ ಮದನಿ ಸೆರ್ಕಳ ನಗರ, ಎಸ್ಸೆಸ್ಸೆಫ್ ಕಲ್ಲಡ್ಕ ಸೆಕ್ಟರ್ ಅಧ್ಯಕ್ಷ ಅಶ್ರಫ್ ನಾರ್ಶ, ಸಮಾಜ ಸೇವಕ ಕರೀಂ ಕದ್ಕಾರ್, ಎಸ್ಸೆಸ್ಸೆಫ್ ಎನ್.ಸಿ.ರೋಡ್ ಅಧ್ಯಕ್ಷ ಸಿದ್ದೀಕ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಸ್ವಾತಂತ್ರೋತ್ಸವದ ಪ್ರಯುಕ್ತ ಎಸ್ಎಂಎ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ರೇಂಜ್ ಕಾರ್ಯದರ್ಶಿ ಮಹ್ಮೂದ್ ಸಅದಿ ಸ್ವಾಗತಿಸಿದರು. ಎಸ್ಎಂಎ ಕಾರ್ಯದರ್ಶಿ ಹನೀಫ್ ಸಖಾಫಿ ಪೇರಮೊಗರು ವಂದಿಸಿದರು.