ಪಡುಮಾರ್ನಾಡು ಮಸೀದಿಯ ಆಡಳಿತಾಧಿಕಾರಿಯಾಗಿ ಅಬೂಬಕರ್ ನೇಮಕ

Update: 2016-11-09 13:19 GMT

ಮುಲ್ಕಿ,ನ.9: ಮುಹಿಯುದ್ದೀನ್ ಜುಮಾ ಮಸೀದಿ ಗುಂಡುಕಲ್ಲು ಕಾಯರ್‌ಕಟ್ಟೆ, ಪಡುಮಾರ್ನಾಡು ಮಸೀದಿಯ ಆಡಳಿತಾಧಿಕಾರಿಯಾಗಿ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕರ್ ನೇಮಕ ಗೊಂಡಿದ್ದಾರೆ.

ಅಬೂಬಕರ್ ಅವರನ್ನು ಕರ್ನಾಟಕ ರಾಜ್ಯ ವಕ್ಫ್‌ಬೋರ್ಡ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಕ ಮಾಡಿ ಈ ಆದೇಶವನ್ನು ಹೊರಡಿಸಿದ್ದಾರೆ.
ಅಬೂಬಕರ್, ಈ ಹಿಂದೆ ಬಜಪೆ ಗ್ರಾಮ ಪಂಚಾಯತ್, ಐಕಳ ಗ್ರಾಮ ಪಂಚಾಯತ್, ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್, ಮತ್ತು ಬಂಟ್ವಾಳದ ಪುದು ಗ್ರಾಮ ಪಂಚಾಯತ್‌ಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News