ಮಿಲಾಗ್ರಿಸ್ ಹಳೆವಿದ್ಯಾರ್ಥಿ ಸಂಘದ ಮಹಾಸಭೆ

Update: 2016-11-21 12:38 GMT

ಉಡುಪಿ, ನ.21: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಜೇಸಿಐ ಇಂಡಿಯಾದ ವಲಯ 15ರ ನೂತನ ವಲಯ ಅಧ್ಯಕ್ಷರಾಗಿ ಆಯ್ಕೆಯಾದ ಕಾಲೇಜಿನ ಹಳೆವಿದ್ಯಾರ್ಥಿಯಾದ ಸಂತೋಷ್ ಜಿ., ಎನ್‌ಸಿಸಿಯಲ್ಲಿ ವಿಶೇಷ ಸಾಧನೆ ಮಾಡಿದ ಜೊವಿಟಾ ಅಂದ್ರಾದೆ, ವಿಶ್ವಾಸ್ ಪ್ರಭು, ಫಿಲೋಮಿನಾ ಗೋಮ್ಸ್ ಹಾಗೂ ಕಾಲೇಜಿನ ಉದ್ಯೋಗಿ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.

ಮಿಲಾಗ್ರಿಸ್ ಸಮೂಹ ಸಂಸ್ಥೆಗಳ ಸಂಚಾಲಕ ವಂ.ಫಾ.ಸ್ಟ್ಯಾನಿ ಬಿ ಲೋಬೋ, ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ಶುಭ ಹಾರೈಸಿದರು. ಲೋಯ್ ಲೀಸ್ ಡಿಸೋಜ, ರೇಖಾ, ಕಾರ್ತಿಕ್ ನಾಯಕ್ ಶುಭಾಶಂಸನೆಗೈದರು.

ಸಂಘದ ಅಧ್ಯಕ್ಷ ಆಲೆನ್ ಲೂವಿಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸೋಫಿಯಾ ಡಾಯಸ್ ವರದಿ ವಾಚಿಸಿದರು. ಉಪಾಧ್ಯಕ್ಷ ಸಾಲ್ವರೋರ್ ನೊರೊನ್ಹಾ ವಂದಿಸಿದರು. ಜೊತೆ ಕಾರ್ಯದರ್ಶಿ ಶೇಖರ್ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News