ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಕಛೇರಿ ಶುಭಾರಂಭ

Update: 2016-12-01 07:11 GMT

ಮಂಗಳೂರು: ಡಿ 1, ಕಂಕನಾಡಿ ವಿಶ್ವಾಸ್ ಕ್ರೌನ್ ಕಟ್ಟಡದಲ್ಲಿ ಆರಂಭವಾದ ಬ್ಯಾರೀಸ್ ಚೇಂಬರ್ ಅಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ)ಯ ಕಛೇರಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಚೇಂಬರ್ ಅಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ)ಯ ಸ್ಥಾಪಕಾಧ್ಯಕ್ಷ ಎಸ್.ಎಂ ರಶೀದ್ ಹಾಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಸಿಸಿಐ ಉಪಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಕೆ.ಎ, ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಆಝಾದ್ ಗ್ರೂಪ್, ಸ್ಥಾಪಕ ಸದಸ್ಯರಾದ ಡಾ. ಯು.ಟಿ ಇಫ್ತಿಕಾರ್, ಎ.ಕೆ ನಿಯಾಝ್, ಶೌಕತ್ ಶೌರಿ ಬ್ಲೂ ಲೈನ್, ಅಜೀವ ಸದಸ್ಯರಾದ ಬಿ.ಎಸ್ ಬಷೀರ್, ಇಮ್ತಿಯಾಝ್ ಖತೀಬ್, ಸುಲೈಮಾನ್ ಶೇಖ್ ಬೆಳುವಾಯಿ ವಿಶ್ವಾಸ್ ಎಸ್ಟೇಟ್ ಮೊದಲಾದವರು ಉಪಸ್ಥಿತರಿದ್ದರು. ರಫೀಕ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News