ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದಿಂದ ಬಾನುಲಿ ಪಾಠ

Update: 2016-12-02 13:36 GMT

ಮಂಗಳೂರು, ಡಿ.2: ವಿಜಯ ಬ್ಯಾಂಕ್ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಬಾನುಲಿ ಪಾಠ ಕಾರ್ಯಕ್ರಮವನ್ನು ಪ್ರಾಯೋಜಿಸಿದೆ.

ಮಂಗಳೂರು ಆಕಾಶವಾಣಿಯಿಂದ 2017ರ ಮಾರ್ಚ್ ತನಕ ಪ್ರತಿ ಶುಕ್ರವಾರ,ಸೋಮವಾರ, ಬುಧವಾರ ಬೆಳಗ್ಗೆ 9:30ರಿಂದ 10ರ ತನಕ ನುರಿತ ಶಿಕ್ಷಕರು ನೀಡುವ ಪಾಠವನ್ನು ಪ್ರಸಾರ ಮಾಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News