ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

Update: 2016-12-06 18:02 GMT

ಮಂಗಳೂರು, ಡಿ.6: ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆ ನಗರದ ಸೂಟರ್‌ಪೇಟೆಯ ಅಂಬೇಡ್ಕರ್ ಸಭಾಭವನದಲ್ಲಿ ಮಂಗಳವಾರ ನಡೆಯಿತು.

ಕರ್ನಾಟಕ ದಸಂಸ ಸಮಿತಿಯ ರಾಜ್ಯ ಮುಖಂಡ ನಿರ್ಮಲ್ ಕುಮಾರ್ ಮಾತನಾಡಿ, ಸಮುದಾಯಕ್ಕೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಯುವಕರು ಆಸಕ್ತಿ ತೋರಿಸಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ನಾಯಕ ಸಂಜೀವ ಸೂಟರ್‌ಪೇಟೆ, ಅಂಬೇಡ್ಕರ್ ಅವರ ಆದರ್ಶವನ್ನು ಮೈಗೂಡಿಸಿಕೊಂಡು ಸಮುದಾಯದ ಅಭಿವೃದ್ಧಿಯ ಭಾಗವಾಗಬೇಕು ಎಂದರು.

ದಲಿತ ಹಿರಿಯ ಮುಖಂಡರಾದ ಈಶ್ವರ್ ಸೂಟರ್‌ಪೇಟೆ, ಸಿ.ಎಚ್.ಭಾಸ್ಕರ್, ತಿಲಕ್‌ಕುಮಾರ್, ಜನಾರ್ದನ್, ಶರತ್‌ಕುಮಾರ್, ಸುದರ್ಶನ್, ಶೈಲೇಶ್, ಸಬಿತ್ ಮೊದಲಾದವರು ಉಪಸ್ಥಿತರಿದ್ದರು.

ದಲಿತ ನಾಯಕ ರಘುವೀರ್ ಸೂಟರ್‌ಪೇಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News