ಡೋಝರ್ ಯಂತ್ರ ಢಿಕ್ಕಿ : ಕಾರ್ಮಿಕ ಸಾವು
ಮೂಡುಬಿದಿರೆ, ಡಿ.7 : ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬೋರುಗುಡ್ಡೆಯ ರೋಬೊ ಸಿಲಿಕಾನ್ ಜಲ್ಲಿಕ್ರಷರ್ನಲ್ಲಿ ಡೋಝರ್ ಯಂತ್ರವೊಂದು ಡಿಕ್ಕಿ ಹೊಡೆದು ಕಾರ್ಮಿಕ ಸಾವನಪ್ಪಿದ ಘಟನೆ ಬುಧವಾರ ನಡೆದಿದೆ.
ಮೃತ ಕಾರ್ಮಿಕನನ್ನು ಬೆಳ್ತಂಗಡಿ ತಾಲ್ಲೂಕಿನ ಉರುವಾಲುಪದವು ನಂದಪ್ಪ ಗೌಡ ಎಂಬವರ ಪುತ್ರ ಸುಜಿತ್ ಕುಮಾರ್(22)ಎಂದು ಗುರುತಿಸಲಾಗಿದೆ.
ಈತ ರೋಬೊ ಸಿಲಿಕಾನ್ ಜಲ್ಲಿಕ್ರಷರ್ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಜಲ್ಲಿ ಕ್ರಷರ್ ಆವರಣದಲ್ಲಿ ಡೋಝರ್ ಯಂತ್ರದ ಮೂಲಕ ಜಲ್ಲಿಯನ್ನು ಸಾಗಾಟ ಮಾಡುವಾಗ ಯಂತ್ರದ ಚಾಲಕ ಮುಹ್ಮದ್ ಫಿರಾಜ್ ಎಂಬವರು ಯಾವುದೇ ಸೂಚನೆ ನೀಡದೆ ವಾಹನವನ್ನು ಒಮ್ಮೆಲೆ ಹಿಂದಕ್ಕೆ ಚಲಿಸಿದಾಗ ಅದರ ಹಿಂದೆ ಕೆಲಸ ಮಾಡುತ್ತಿದ್ದ ಸುಜಿತ್ಗೆ ಡಿಕ್ಕಿ ಹೊಡೆದು ಆತ ಗಂಭೀರ ಗಾಯಗೊಂಡು ಸಾವನಪ್ಪಿದ್ದ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲಕ, ಹಾಗೂ ಮೆನೇಜರ್ ರಾಘವೇಂದ್ರ, ಯಂತ್ರದ ಚಾಲಕ ಮುಹ್ಮದ್ ಫಿರಾಜ್ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.