ಬಿಜೆಪಿಯವರಿಗೆ ರಥಯಾತ್ರೆ ಮಾಡುವ ನೈತಿಕತೆಯಿಲ್ಲ: ಐವನ್

Update: 2016-12-10 05:59 GMT

ಮಂಗಳೂರು, ಡಿ.10: ಎತ್ತಿನಹೊಳೆ ಯೋಜನೆ ಕುರಿತಂತೆ ಸದನದಲ್ಲಿ ಬಿಜೆಪಿಯ ಶಾಸಕರಾದ ಕ್ಯಾ.ಗಣೇಶ್ ಕಾರ್ಣಿಕ್ ಹಾಗೂ ಶ್ರೀನಿವಾಸ ಪೂಜಾರಿ ಮಾತ್ರ ಚರ್ಚಿಸಿದ್ದಾರೆ. ಆದರೆ ಬಿಜೆಪಿಯ ಬೇರೆ ಯಾವೊಬ್ಬ ಜನಪ್ರತಿನಿಧಿಯೂ ಈ ಯೋಜನೆಯನ್ನು ಸದನದಲ್ಲಿ ವಿರೋಧಿಸಿಲ್ಲ. ಈ ಯೋಜನೆಯ ವಿರುದ್ಧ ರಥಯಾತ್ರೆ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
 ಎತ್ತಿನಹೊಳೆ ಯೋಜನೆಯ ಕುರಿತಂತೆ ಸದನದಲ್ಲಿ ನಾನು ಮಾತನಾಡಿದ್ದೇನೆ. ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಡಿಸೆಂಬರ್ ಅಂತ್ಯದೊಳಗೆ ಈ ಭಾಗದ ಜನರೊಂದಿಗೆ ಸಭೆ ಕರೆಯುವಂತೆ ಅವರನ್ನು ಒತ್ತಾಯಿಸಲಾಗುವುದು. ಈ ಯೋಜನೆ ಕುರಿತಂತೆ ಪ್ರಸ್ತುತ ನಡೆಯುತ್ತಿರುವ ಘಟನೆಗಳನ್ನು ಅವರ ಗಮನಕ್ಕೆ ತರುತ್ತೇನೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News