ಕೃಷ್ಣಾಪುರ: ಈದ್ಗಾ ಜುಮಾ ಮಸೀದಿಯ ಮೇಲಂತಸ್ತು ಉದ್ಘಾಟನೆ

Update: 2016-12-14 16:02 GMT

ಸುರತ್ಕಲ್, ಡಿ.14: ಪಿಝಾ ಗ್ರೂಪ್ ಮಾಲಕ ಬಿ.ಎಂ. ಫಾರೂಕ್‌ರ ತಾಯಿ ಆಯಿಶಮ್ಮ ಅವರ ಸ್ಮರಣಾರ್ಥ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತ ಕೃಷ್ಣಾಪುರ 7ನೆ ಬ್ಲಾಕ್ ಇದ್ಗಾನ್ ಜುಮಾ ಮಸೀದಿಯ ಮೇಲಂತಸ್ತಿನ ನೂತನ ಕಟ್ಟಡವನ್ನು ಅಸ್ಸೈಯದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ ಕಡಲುಂಡಿ ತಂಜಳ್ ಉದ್ಘಾಟಿಸಿದರು.

 ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮುಸ್ಲಿಮ್ ಜಮಾಅತ್‌ನ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ವಕ್ಫ್ ಕೈಕರ್ಯವನ್ನು ನಿರ್ವಹಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣಾಪುರ ಮುಸ್ಲಿಮ್ ಜಮಾಅತ್‌ನ ಜುಮಾ ಮಸೀದಿಯ ಅಧ್ಯಕ್ಷ ಪಿ.ಎಂ.ಉಸ್ಮಾನ್ ವಹಿಸಿದ್ದರು. 

ಶಾಸಕ ಮೊಯ್ದಿನ್ ಬಾವ, ಯೆನೆಪೊಯ ವಿವಿಯ ಕುಲಾಧಿಪತಿ ವೈ. ಅಬ್ದುಲ್ಲಾ ಕುಂಞಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಉಡುಪಿ ಮತ್ತು ದ.ಕ ಜಿಲ್ಲಾ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮಸೂದ್, ಅಲ್ ಮುಝೈನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಝಕರಿಯಾ ಜೋಕಟ್ಟೆ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮುಡಾ ಮಾಜಿ ಅಧ್ಯಕ್ಷ ಅಲ್ಹಾಜ್ ಇಬ್ರಾಹೀಂ ಕೋಡಿಜಾಲ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಬಿ.ಎಂ. ಮುಮ್ತಾಝ್ ಅಲಿ, ಮನಪಾ ಸದಸ್ಯ ಅಯಾಝ್ ಕೃಷ್ಣಾಪುರ, ಫ್ಲಾಝಾ ಟವರ್‌ನ ಮುಖ್ಯಸ್ಥ ಅಲ್ಹಾಜ್ ಪಿ.ಸಿ.ಬಾವಾ, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ, ಅಲ್ ಜುಬೈಲ್ ಟೇಬಲ್ ಫಾರ್ ಗ್ರೂಪ್‌ನ ಮುಖ್ಯಸ್ಥ ಮುಹಮ್ಮದ್ ಮುಬೀನ್ ಬಿ. ಅಬ್ದುಲ್ ಹಕೀಂ ಪಾಲ್ಕನ್ ಮೊದಲಾದವರು ಉಪಸ್ಥಿತರಿದ್ದರು.ಈದ್ಗಾ ಮಸೀದಿ ಅಧ್ಯಕ್ಷರಾದ ಝಾಕಿರ್ ಹುಸೇನ್ ರವರು ಸ್ವಾಗತಿಸಿದರು.ಕಾರ್ಯದರ್ಶೀ ಇಸ್ಮಾಯಿಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News