ಅಸಹಾಯಕತೆ ದುರ್ಬಳಕೆ ಸರಿಯಲ್ಲ: ಸಚಿವೆ ಉಮಾಶ್ರೀ

Update: 2016-12-15 09:04 GMT

ಮಂಗಳೂರು, ಡಿ.15: ಸಹಾಯ ಕೇಳಿಕೊಂಡು ಬಂದ ಯಾರನ್ನೇ ಆಗಲಿ, ಅದರಲ್ಲೂ ಮಹಿಳೆಯರ ಅಸಹಾಯಕತೆಯನ್ನು ದುರ್ಬಳಕೆ ಮಾಡುವುದು ಸರಿಯಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಗುರುವಾರ ಮಂಗಳೂರಿಗೆ ಆಗಮಿಸಿದ ಅವರು, ಮಾಧ್ಯಮ ಪ್ರತಿನಿಗಳ ಪ್ರಶ್ನೆಗೆ ಉತ್ತರಿಸಿದರು. ಸಚಿವರಾಗಿದ್ದ ಮೇಟಿ ಅಥವಾ ಇನ್ನಾರೇ ಆಗಲಿ ಇಂತಹ ನಡತೆ ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅವರ ರಾಜೀನಾಮೆ ಪಡೆದುಕೊಂಡು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ವರದಿ ಬಂದ ಪ್ರಕರಣದ ಸತ್ಯಾಸತ್ಯತೆ ಏನು ಎಂಬುದು ಸ್ಪಷ್ಟವಾಗಲಿದೆ ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಮಾಜಿ ಸಚಿವ ಮೇಟಿ ಲೈಂಗಿಕ ಹಗರಣವನ್ನು ಸಿಐಡಿ ಬದಲು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಉಮಾಶ್ರೀ, ಸಿಐಡಿ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತದೆ. ಯಾವ ಕಾರಣಕ್ಕೂ ಅದು ಯಾರಿಗೂ ಅನುಕೂಲಕರ ವರದಿ ಸಲ್ಲಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News