ಸೈಂಟ್ ರೇಮಂಡ್ಸ್ ಪ. ಪೂ. ಕಾಲೇಜು ಎನ್ನೆಸ್ಸೆಸ್ ಶಿಬಿರ ಸಮಾರೋಪ

Update: 2016-12-15 11:29 GMT

ಮುಡಿಪು , ಡಿ.15 :   ಸೈಂಟ್ ರೇಮಂಡ್ಸ್ ಪ. ಪೂ. ಕಾಲೇಜು ವಾಮಂಜೂರು ಇದರ ರಾ. ಸೇ. ಯೋ. ಘಟಕದ 2016-17 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ದೇರಳಕಟ್ಟೆ  ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾನೀರು ಇಲ್ಲಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಆಶೀರ್ವಚನ ನೀಡಿದ ಪಾನೀರು ಚರ್ಚ್‌ನ ಧರ್ಮಗುರು  ರೆ.ಫಾ. ಡೆನಿಸ್ ಸುವಾರಿಸ್‌ರವರುರಾ, ಎನ್ನೆಸ್ಸೆಸ್ ನ  ಇಂತಹ ಶಿಬಿರಗಳು ಸದೃಢ ಸಮಾಜ ಮತ್ತು ಸಜ್ಜನ ವ್ಯಕ್ತಿಗಳನ್ನು ಸಮಾಜಕ್ಕೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ವಂ. ಭ. ಸಾಧನಾ ಬಿ.ಎಸ್.  ,  ಶಿಬಿರದಲ್ಲಿ ಕಲಿತ ಎಲ್ಲಾ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಪ್ರಯತ್ನ ಮಾಡಬೇಕು ಎಂದರು.  

 ಸಹಕಾರ್ಯಕ್ರಮಾಧಿಕಾರಿ ಜಯರಾಮ ಗೌಡ ಸ್ವಾಗತಿಸಿದರು .

ಕಾರ್ಯಕ್ರಮಾಧಿಕಾರಿ  ದಿನಕರ್ ಅಂಚನ್ ವಂದಿಸಿದರು.

ಶಿಭಿರಾರಾರ್ಥಿಗಳಾದ  ಧನುಷ್ ಮತ್ತು  ಪೃಥ್ವಿ ಏಳು ದಿನಗಳ ಶಿಬಿರದ ಸಂಕ್ಷಿಪ್ತ  ವರದಿಯನ್ನು ಮಂಡಿಸಿದರು.

ಶಿಬಿರಾರ್ಥಿ  ಪೂಜಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News