ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ವತಿಯಿಂದ ಧಾರ್ಮಿಕ ಪ್ರವಚನ

Update: 2016-12-19 09:51 GMT

ಮಂಗಳೂರು, ಡಿ.19: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್  ಹಮ್ಮಿಕೊಂಡಿರುವ ಕುರ್ ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಕಣ್ಣೂರು ಇಂಗ್ಲೀಷ್ ಮೀಡಿಯಂ ಶಾಲೆಯ ಬಳಿ ಡಿ.18ರಂದು ಸಂಜೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.

ಮೌಲವಿ ಮುಹಮ್ಮದ್ ರಫೀಕ್  ಇಸ್ಲಾಮೀ ಆದರ್ಶ ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ ನೀಡಿದರು. ಮುಖ್ಯ ಭಾಷಣಗಾರರಾಗಿ ಆಗಮಿಸಿದ ಹಿರಿಯ ವಿದ್ವಾಂಸ ಮೌಲವಿ ಅಬ್ದುಲ್ಲಾಹ್ ಚುಯಲಿಯವರು ಕಲಿಮತ್ತುಶ್ಶಹಾದ ಎಂಬ ವಿಷಯದಲ್ಲಿ  ಪ್ರವಚನ ನೀಡಿದರು. ಎಸ್ಕೆಎಸ್ಸೆಂನ ಅಧ್ಯಕ್ಷ  ಯು.ಎನ್. ಅಬ್ದುರ್ರಝಾಕ್ ಹಾಜಿ, ಪ.ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ಎಸ್ಕೆಎಸ್ಸೆಮ್ ಅಡ್ಯಾರ್-ಕಣ್ಣೂರು ಘಟಕದ ಅಧ್ಯಕ್ಷ ಅಹ್ಮದ್ ಬಾವ ಮತ್ತಿತರರು ಉಪಸ್ಥಿತರಿದ್ದರು. ಅಬ್ದರ್ರಝ್ಝಾಕ್ ಉಮರಿ ಸ್ವಾಗತಿಸಿದರು ಇಸ್ಮಾಯೀಲ್ ಶಾಫಿಯವರು ಧನ್ಯವಾದ ಅರ್ಪಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News