ಐ.ಟಿ ಅಧಿಕಾರಿಗಳ ಅಧಿಕಾರ ದುರುಪಯೋಗವನ್ನು ನಾನು ಕಂಡಿದ್ದೇನೆ : ಜನಾರ್ದನ ಪೂಜಾರಿ

Update: 2017-08-12 12:56 GMT

ಮಂಗಳೂರು.ಆ,12: ಆದಾಯ ತೆರಿಗೆ ಅಧಿಕಾರಿಗಳಿಂದ ಅಧಿಕಾರ ದುರುಪಯೋಗವಾಗುತ್ತಿರುವುದನ್ನು ನಾನು ಕೇಂದ್ರದಲ್ಲಿ ಸಚಿವನಾಗಿದ್ದಾಗ ಕಂಡಿದ್ದೇನೆ.ರಾಜ್ಯದಲ್ಲೂ ಈ ರೀತಿ ಐ.ಟಿ ಅಧಿಕಾರಿಗಳನ್ನು ಬಳಸಿಕೊಂಡು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ವಲಯದಲ್ಲಿ ಪ್ರಬಲ ನಾಯಕನಾಗಲು ಬೆಳೆಯುತ್ತಿರುವ ಡಿ.ಕೆ.ಶಿವಕುಮಾರ್‌ರನ್ನು ಮಟ್ಟಹಾಕುವ ಪ್ರಯತ್ನ ನಡೆದಿದೆ.ರಾಜ್ಯದಲ್ಲಿ ದಲಿತರನ್ನು ಅಥವಾ ಡಿ.ಕೆ.ಶಿವಕುಮಾರ್‌ರನ್ನು ಮುಖ್ಯಮಂತ್ರಿಯಾಗಿ ಮಾಡಿದರೆ ಕಾಂಗ್ರೆಸ್ ಉಳಿಯಬಹುದು.ಇಲ್ಲವಾದರೆ ಅಮಿತ್‌ಷಾ ತಮ್ಮ ಗುರಿಯನ್ನು ಸಾಧಿಸುತ್ತಾರೆ ಎಂದು ಪೂಜಾರಿ ತಿಳಿಸಿದ್ದಾರೆ.

ಕಲ್ಲಡ್ಕದ ಪ್ರಭಾಕರ ಭಟ್‌ರವರ ಮೂಲಕ ನಡೆಸುತ್ತಿರುವ ಶಾಲೆಗೆ ಅನುದಾನ ಸ್ಥಗಿತಗೊಳಿಸಿರುವುದು ಸರಿಯಲ್ಲ:

ಕಲ್ಲಡ್ಕದ ಪ್ರಭಾಕರ ಭಟ್‌ರವರ ನೇತೃತ್ವದಲ್ಲಿ ನಡೆಯುತ್ತಿರುವ ಶಾಲೆಗೆ ರಾಜ್ಯ ಸರಕಾರ ಅನುದಾನ ಸ್ಥಗಿತಗೊಳಿಸಿರುವುದು ಸರಿಯಾದ ಕ್ರಮವಲ್ಲ.ಶಾಲೆಯನ್ನು ಯಾರು ,ಯಾವ ಸಂಘಟನೆಯವರು ಎಂದು ಮುಖ ನೋಡಿ ಅನುದಾನ ನೀಡುವುದು ಸರಿಯಲ್ಲ .ಮಕ್ಕಳ ಭವಿಷ್ಯ ಉತ್ತಮವಾಗಬೇಕು ಎನ್ನುವುದು ಮುಖ್ಯ.ಅಲ್ಲಿ ಮಕ್ಕಳಿಗೆ ಊಟ ಮಾಡಲು ಅನುದಾನ ನೀಡದಿರುವುದು ಅಕ್ಷಮ್ಯ ಅಪರಾಧ.ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರವನ್ನು ಮುಖ್ಯ ಮಂತ್ರಿಯ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಬೇಕು.ಅನುದಾನ ನೀಡಬೇಕು ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News