ಮೇಯರ್‌ರಿಂದ ವಾರ್ಡ್ ಅಷ್ಟಮಿ ಕೊಡುಗೆ!

Update: 2017-08-13 11:46 GMT

ಮಂಗಳೂರು, ಆ.12: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಪಚ್ಚನಾಡಿ ವಾರ್ಡ್‌ನ ಕಾರ್ಪೊರೇಟರ್ ಕೂಡಾ ಆಗಿರುವ ಕವಿತಾ ಸನಿಲ್‌ರವರು ತಮ್ಮ ವಾರ್ಡ್‌ನ 1000 ಮಂದಿಗೆ ತಲಾ 5 ಕೆಜಿ ಅಕ್ಕಿ ಹಾಗೂ ತೆಂಗಿನ ಕಾಯಿ ವಿತರಿಸಿದರು.

ಕಳೆದ ಒಂದು ವರ್ಷದ ತಮ್ಮ ಗೌರವಧನ ಹಾಗೂ ಒಂದಿಷ್ಟು ತಮ್ಮ ಸ್ವಂತ ದುಡ್ಡನ್ನು ಸೇರಿಸಿ ಈ ಅಷ್ಟಮಿ ಕೊಡುಗೆಯನ್ನು ಅವರು ವಿತರಿಸಿದರು.

ಪಚ್ಚನಾಡಿ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News