ಕರಾವಳಿ ಸಂಗೀತ ಕಲಾವಿದರ ಒಕ್ಕೂಟ: ಆನ್ಲೈನ್ನಲ್ಲಿ ರಾಷ್ಟ್ರಗೀತೆಯ ಹೊಸ ವೀಡಿಯೊ
ಉಡುಪಿ, ಆ.14: ಮಂಗಳೂರು-ಉಡುಪಿ ಜಿಲ್ಲಾ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜನ-ಗಣ-ಮನ ರಾಷ್ಟ್ರ ಗೀತೆಯನ್ನು ಜಿಲ್ಲೆಯಲ್ಲಿ ವಿನೂತನವಾಗಿ ಚಿತ್ರೀಕರಿಸಿದ ವೀಡಿಯೊ ಆನ್ಲೈನ್ ಮೂಲಕ ಇಂದು ಮಧ್ಯರಾತ್ರಿ ಪ್ರಸ್ತುತ ಪಡಿಸುತಿದ್ದೇವೆ ಎಂದು ಒಕ್ಕೂಟದ ಅಧ್ಯಕ್ಷ ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ರಾಷ್ಟ್ರಗೀತೆಯನ್ನು ಒಕ್ಕೂಟದಲ್ಲಿ 50 ಮಂದಿ ಕಲಾವಿದರೇ ಭಾಗವಹಿಸಿದ್ದು, ಗಾಯನ, ಅಭಿನಯ, ಸಂಗೀತ, ಚಿತ್ರೀಕರಣ, ಧ್ವನಿಮುದ್ರಣ ಎಲ್ಲವೂ ಸ್ಥಳೀಯ ವಾಗಿಯೇ ನಡೆದಿದೆ. ಗೀತೆಯನ್ನು ಕಾಪು ದ್ವೀಪಸ್ತಂಭ, ಮಲ್ಪೆ, ಪಡುಕೆರೆ ಆಸುಪಾಸಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಈ ಜನ-ಗಣ-ಮನ ರಾಷ್ಟ್ರಗೀತೆಯ ವೀಡಿಯೊ ಇಂದು ಮಧ್ಯರಾತ್ರಿ ಯೂಟ್ಯೂಬ್ಗೆ ಅಪ್ಲೋಡ್ ಆಗಲಿದ್ದು, ಇದನ್ನು ಆನ್ಲೈನ್ನಲ್ಲಿ ವೀಕ್ಷಿಸಬಹುದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರೇಮ್ಕುಮಾರ್, ಸುಭಾಷಿತ್ ಕುಮಾರ್, ನವೀನ್ಚಂದ್ರ ಕೊಪ್ಪ, ಶರತ್ ಉಚ್ಚಿಲ ಉಪಸ್ಥಿತರಿದ್ದರು.