ಬಸ್ ಚಾಲಕನಿಗೆ ಹಲ್ಲೆ

Update: 2017-08-14 16:29 GMT

ಮಂಗಳೂರು, ಆ.14: ಸುರತ್ಕಲ್-ಮಂಗಳಾದೇವಿ ಮಧ್ಯೆ ಚಲಿಸುವ ಬಸ್ ಚಾಲಕ ಹಕೀಮ್ ಎಂಬವರಿಗೆ ಇಬ್ಬರು ಹಲ್ಲೆ ನಡೆಸಿದ ಘಟನೆ ಸೊಮವಾರ ನಡೆದಿದೆ.

ಸುರತ್ಕಲ್‌ನಿಂದ ಕುತ್ತೆತ್ತೂರಿಗೆ ಬಸ್ ಚಲಿಸುತ್ತಿದ್ದಾಗ ಸೈಡ್ ಕೊಡುವ ವಿಚಾರದಲ್ಲಿ ಬೈಕ್ ಸವಾರನೋರ್ವ ಮಂಗಳಪೇಟೆಯಲ್ಲಿ ಚಾಲಕ ಹಕೀಮ್‌ಗೆ ಅವಾಚ್ಯ ಶಬ್ದದಿಂದ ಬೈದಿದ್ದ. ಈ ಬಸ್ ಕುತ್ತೆತ್ತೂರಿನಿಂದ ಮರಳಿ ಮಂಗಳಾದೇವಿಯತ್ತ ತೆರಳುತ್ತಿದ್ದಾಗ ಎಂಆರ್‌ಪಿಎಲ್ ಬಳಿ ಸ್ಕೂಟರ್‌ನಲ್ಲಿ ಬಂದ ಇಬ್ಬರು ತಡೆದು ನಿಲ್ಲಿಸಿ ಚಾಲಕ ಹಕೀಂಗೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಎದೆಗೆ ಕೈಯಿಂದ ಗುದ್ದಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಈ ಬಗ್ಗೆ ಹಕೀಂ ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News