ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಸ್ವಾತಂತ್ರ್ಯೋತ್ಸವ

Update: 2017-08-15 10:48 GMT

ಮಂಗಳೂರು, ಆ. 15: ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ವತಿಯಿಂದ ಸ್ಟೇಟ್‌ಬ್ಯಾಂಕ್ ಪ್ರದೇಶದಲ್ಲಿ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ರಾವ್ ಆ್ಯಂಡ್ ರಾವ್ ಸರ್ಕಲ್ ಪ್ರದೇಶದಲ್ಲಿ ಸಂಘದ ಪದಾಧಿಕಾರಿ ನಝೀರ್, ಮೈದಾನ ರಸ್ತೆ ಪ್ರದೇಶದ ಸಿಐಟಿಯು ಕಚೇರಿ ಬಳಿ ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಮೈದಾನ ರಸ್ತೆ ಪ್ರದೇಶದ ಟೆಂಪೋ ಪಾರ್ಕ್ ಬಳಿ ಸಂಘದ ಪದಾಧಿಕಾರಿ ಹರೀಶ್ ಪೂಜಾರಿ, ಲೇಡಿಗೋಶನ್ ಪ್ರದೇಶದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್., ಹಂಪನಕಟ್ಟೆ ಪ್ರದೇಶದಲ್ಲಿ ಸಂಘದ ಖಜಾಂಚಿ ಅತ್ತಾವುಲ್ಲಾ ಧ್ವಜಾರೋಹಣ ನೆರವೇರಿಸಿದರು.

ಸಂಘದ ವತಿಯಿಂದ ನಗರದ ಲೇಡಿಗೋಷನ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ಈ ಸಂದರ್ಭ ಆಸಿಫ್, ನೌಶಾದ್, ಮುಜಾಫರ್, ಹಸನ್, ಮೇರಿ ಡಿಸೋಜ, ಮೇಬಲ್, ಹಾಲಪ್ಪ, ಖಾಲಿದ್, ಸೆಲ್ವರಾಜ್, ಮುತ್ತುರಾಜು, ಶಿವಪ್ಪ, ಹಂಝ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News