ಎಣ್ಮೂರು: ಎಂವೈಎಸ್ ವತಿಯಿಂದ ಸ್ವಾತಂತ್ರೋತ್ಸವ ಆಚರಣೆ

Update: 2017-08-15 14:16 GMT

ಸುಳ್ಯ, ಆ.15: ದರ್ಗಾಶರೀಫ್ ಮತ್ತು ಜುಮಾ ಮಸೀದಿ ಎಣ್ಮೂರು, ಐವತ್ತೊಕ್ಲು ಇದರ ಆಶ್ರಯದಲ್ಲಿ ಮುಸ್ಲಿಂ ಯುವಜನ ಸಂಘ(ಎಂವೈಎಸ್) ಇದರ ವತಿಯಿಂದ ಸ್ವಾತಂತ್ರೋತ್ಸವವನ್ನು ಮಸೀದಿ ವಾಠಾರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಮಸೀದಿಯ ಖತೀಬ್ ಅಬ್ದುರ್ರಹೀಂ ಸಖಾಫಿ ಅಲ್‌ಅಝ್ಹರಿ ಧ್ವಜಾರೋಹಣಗೈದು ಸ್ವಾತಂತ್ರೋತ್ಸವದ ಸಂದೇಶವನ್ನು ನೀಡಿದರು.

ಜುಮಾ ಮಸೀದಿಯ ಅಧ್ಯಕ್ಷ ಕೆ.ಎಂ. ಇಸ್ಮಾಯೀಲ್ ಪಡ್ಪಿನಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಜ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ, ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಆಕ್ರಿಕಟ್ಟೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

 ಈ ಸಂದರ್ಭ ಪಂಜ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಪುರಿಯ, ಜುಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಟಿ.ಎಸ್., ಎಂವೈಎಸ್ ಅಧ್ಯಕ್ಷ ಅಲಿ ಮುಚ್ಚಿಲ, ಮದ್ರಸ ಅಧ್ಯಾಪಕರಾದ ಅಬ್ದುಲ್ ರಝಾಕ್ ಬಾಖವಿ, ಅಬೂಬಕರ್ ಸಅದಿ, ಖಾಸಿಂ ಸಅದಿ , ಅಶ್ರಫ್ ಸಅದಿ ಉಪಸ್ಥಿತರಿದ್ದರು.
ರಫೀಕ್ ಐವತ್ತೊಕ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಹನೀಫ್ ಎಂ.ಕೆ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News