ಆ.17: ಸ್ವಚ್ಚ ಮಿಷನ್ ಮಾಹಿತಿ ಕಾರ್ಯಕ್ರಮ

Update: 2017-08-15 15:49 GMT

ಉಡುಪಿ, ಆ.15: ಜಿಲ್ಲೆಯಲ್ಲಿರುವ ನಿರುದ್ಯೋಗಿ ಯುವಕ ಯುವತಿಯರಿಗೆ ಘನ ಮತ್ತು ದ್ರವ ಸಂಪನ್ಮೂಲ ಕ್ಷೇತ್ರದಲ್ಲಿರುವ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಆ.17ರಂದು ಬೆಳಗ್ಗೆ 10 ಕ್ಕೆ ಮಣಿಪಾಲದಲ್ಲಿ ರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಇಲ್ಲಿ ಆಸಕ್ತರಿಗೆ 6 ದಿನಗಳ ತರಬೇತಿ ನೀಡಲಾಗುವುದು. ಅವರು ಈ ಕಾರ್ಯಕ್ರಮದಲ್ಲಿ ಸ್ವ ಸಹಾಯ ಸಂಘಗಳೊಂದಿಗೆ ಭಾಗವಹಿಸಬಹುದು. ಈ ಕ್ಷೇತ್ರದಲ್ಲಿ ಮೇಲ್ವಿಚಾರಕರಾಗಿ ಹಾಗೂ ಸಹಾಯಕರಾಗಿ ಯಾವುದೇ ವಿದ್ಯಾಭ್ಯಾಸ ಹೊಂದಿರುವವರು ಭಾಗವಹಿಸಬಹುದು ಎಂದು ಜಿಲ್ಲಾಧಿಕಾರಿ ಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News