ಕ.ರ.ವೇ. ವತಿಯಿಂದ 'ಚಿಂತನ ಮಂಥನ'

Update: 2017-08-15 16:32 GMT

ಮಂಗಳೂರು, ಆ. 15: ಕ.ರ.ವೇ.ಯ ದ.ಕ. ಜಿಲ್ಲಾ ಘಟಕದ ವತಿಯಿಂದ ರಾಜ್ಯಾಧ್ಯಕ್ಷ  ಟಿ.ಎ.ನಾರಾಯಣ ಗೌಡರ ಅಧ್ಯಕ್ಷತೆಯಲ್ಲಿ 'ಚಿಂತನ ಮಂಥನ' ಕಾರ್ಯಕ್ರಮ ನಗರದ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಕ್ಲಬ್ ನಲ್ಲಿ  ನಡೆಯಿತು.

ಸಭೆಯ ಬಳಿಕ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ  ಕೊಣಾಜೆ ಮೂಲದ ಮೊಹಶೀರ್ ಅಹ್ಮದ್ ಸಾಮಣಿಗೆ ಅವರನ್ನು ಸರ್ವಾನುಮತದಿಂದ ಜಿಲ್ಲಾ ವಕ್ತಾರರಾಗಿ ಆಯ್ಕೆ ಮಾಡಲಾಯಿತು.

ಕಳೆದ 8 ವರ್ಷಗಳಿಂದ ಕ.ರ.ವೆ ಯಲ್ಲಿ ಗುರುತಿಸಿಕೊಂಡಿದ್ದ ಇವರು ಹಲವಾರು ಸಂಘಟನೆಗಳಲ್ಲಿ ತಮ್ಮನ್ನು  ತೊಡಗಿಸಿಕೊಂಡು ಬಂದಿದ್ದಾರೆ.  ಜಿಲ್ಲೆಯ ಎಲ್ಲಾ ಜಾತಿ ಧರ್ಮದವರಲ್ಲಿ ಸಮಾನತೆಯನ್ನು ಕಂಡು ಕೊಂಡು ಜಿಲ್ಲೆಯ ಸಮಸ್ಯೆಗಳಾದ ನೇತ್ರಾವತಿ ವಿಚಾರ, ದ.ಕ.ಜಿಲ್ಲೆಯ ಪುರಾತನ  ಕ್ರೀಡೆಯಾದ ಕಂಬಳ, ಏರ್ ಪೋಟ್ ನಲ್ಲಿ ಪ್ರಯಾಣಿಕರೊಂದಿಗೆ ನಡೆದ ದೌರ್ಜನ್ಯ, ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ, ರಕ್ತದಾನ, ಕಣ್ಣಿನ ತಪಾಸಣೆ ಮುಂತಾದ ಹಲವಾರು ಹೋರಾಟಗಳಲ್ಲಿ ಮತ್ತು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದು ಹಿರಿಯ ಕಾಂಗ್ರೆಸ್ ಮುಖಂಡ ಟಿ.ಎಸ್. ಅಬ್ದುಲ್ಲಾ ಅವರ ಪುತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News