2.97ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣೆ

Update: 2017-08-18 14:29 GMT

ಕಾಪು, ಆ.18: ವಿನೋದ್ ಮತ್ತು ಡಾ.ಚಂದ್ರಶೇಖರ್ ಶೆಟ್ಟಿ ಕಾಪು ಪೌಂಡೇಶನ್ ವತಿಯಿಂದ ಬುಧವಾರ ಶಿರ್ವ ವಿದ್ಯಾವರ್ಧಕ ಸಂಘದ ಅಧೀನ ಶಿಕ್ಷಣ ಸಂಸ್ಥೆಯ 200 ವಿದ್ಯಾರ್ಥಿಗಳಿಗೆ 2.97ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ಇತ್ತೀಚೆಗೆ ವಿತರಿಸಲಾಯಿತು.

ಸಂಸ್ಥೆಯ ಹಳೆವಿದ್ಯಾರ್ಥಿ ಡಾ.ಚಂದ್ರಶೇಖರ್ ಶೆಟ್ಟಿ ನೆರವಿನ ಈ ವಿದ್ಯಾರ್ಥಿ ವೇತನವನ್ನು ಪೌಂಡೇಶನ್‌ನ ಟ್ರಸ್ಟಿ ಸೀಮಾ ಹರೀಶ್ ರೈ ವಿತರಿಸಿದರು. ತೌಳವ ಫೌಂಡೇಶನ್‌ನ ಸಂಚಾಲಕ ಪ್ರೊ.ಎನ್.ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ದಲ್ಲಿ ಸಂಸ್ಥೆಯಿಂದ ನಿವೃತ್ತಿ ಹೊಂದುತ್ತಿರುವ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಗೋಪಾಲ ಕೃಷ್ಣ ರಾವ್ ಅವರನ್ನು ಸನ್ಮಾನಿಸಿ ಬೀಳ್ಕೊಡ ಲಾಯಿತು.

ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ್ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದದರು. ಹಿಂದೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ರಾವ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶಕಿಲಾ ವಂದಿಸಿದರು. ಶಿಕ್ಷಕಿಯ ರಾದ ಸುಪ್ರಿತಾ ಶೆಟ್ಟಿ ಹಾಗೂ ವಸಂತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News