ಜಾನುವಾರು ಸಾಗಾಟಗಾರರಿಗೆ ಹಲ್ಲೆ: ದೂರು

Update: 2017-08-18 17:22 GMT

ಕುಂದಾಪುರ, ಆ.18: ಪಿಕಪ್ ವಾಹನದಲ್ಲಿ ಎತ್ತುಗಳನ್ನು ಸಾಗಿಸುತ್ತಿದ್ದ ಇಬ್ಬರಿಗೆ ತಂಡವೊಂದು ಅಡ್ಡಗಟ್ಟಿ ಹಲ್ಲೆಗೈದು, ಬೆದರಿಕೆ ಹಾಕಿರುವ ಘಟನೆ ಆ.17ರಂದು ಮಧ್ಯಾಹ್ನ 3.45ರ ಸುಮಾರಿಗೆ ಆನಗಳ್ಳಿ ಗ್ರಾಮದ ಹೇರಿಕುದ್ರು ಸೇತುವೆ ಬಳಿ ನಡೆದಿದೆ.

ಬಿಜೂರು ಗ್ರಾಮದ ಹೆರಿಯಾ ನಿವಾಸಿ ರತ್ನಾಕರ ಮತ್ತು ಕೋಡಿಯ ಸಿದ್ದ ಪೂಜಾರಿ ಎಂಬವರು ಉಪ್ಪುಂದದಿಂದ ಕೋಡಿಗೆ ಎರಡು ಎತ್ತುಗಳನ್ನು ವಾಹನ ದಲ್ಲಿ ಸಾಗಾಟ ಮಾಡುವಾಗ 4-5 ಮಂದಿ ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿ, ಅವಾಚ್ಯವಾಗಿ ಬೈದು, ಕೆನ್ನೆಗೆ, ಮುಖಕ್ಕೆ, ಬೆನ್ನಿಗೆ ಹೊಡೆದು, ಕಾಲಿ ನಿಂದ ತುಳಿದು ಬೆದರಿಕೆ ಹಾಕಿ ಹಲ್ಲೆ ಮಾಡಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.

ಅಕ್ರಮ ಸಾಗಾಟ: ಮಾಹಿತಿ ತಿಳಿದು ಕುಂದಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಪಿಕಪ್  ವಾಹನವನ್ನು ಹಿಡಿದಿಟ್ಟಿದ್ದ ಸ್ಥಳೀಯ ಜನರು ಓಡಿ ಹೋಗಿದ್ದು, ಬಳಿಕ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಎರಡು ಎತ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಖಚಿತಪಡಿಸಿಕೊಂಡು ಜಾನುವಾರು ಹಾಗೂ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News