ಲಾರಿ- ರಿಕ್ಷಾ ಢಿಕ್ಕಿ: ಮೂವರಿಗೆ ಗಾಯ
Update: 2017-08-19 17:31 GMT
ಬ್ರಹ್ಮಾವರ, ಆ.19: ರಿಕ್ಷಾವೊಂದು ರಸ್ತೆ ಬದಿ ನಿಲ್ಲಿಸಿದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸಹಿತ ಮೂವರು ಗಾಯಗೊಂಡ ಘಟನೆ ಉಪ್ಪಿನಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆ.19ರಂದು ಬೆಳಗಿನ ಜಾವ 5.45ರ ಸುಮಾರಿಗೆ ನಡೆದಿದೆ.
ರಿಕ್ಷಾದಲ್ಲಿದ್ದ ಕೋಡಿ ಹೊಸ ಬೆಂಗ್ರೆಯ ರತ್ನ ಮರಕಾಲ್ತಿ(52), ಕುಸುಮ ಹಾಗೂ ರಿಕ್ಷಾ ಚಾಲಕ ಅಶೋಕ ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಮೀನು ತರಲೆಂದು ರಿಕ್ಷಾದಲ್ಲಿ ಮಲ್ಪೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.