ಆಳ್ವಾಸ್ ವಿದ್ಯಾರ್ಥಿ ನಿಲಯ ಕಟ್ಟಡ ಸಮುಚ್ಚಯ ಉದ್ಘಾಟನೆ

Update: 2017-08-20 06:59 GMT

ಮೂಡುಬಿದಿರೆ, ಆ.20: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಟ್ಟಡ ಸಮುಚ್ಚಯಗಳನ್ನು ಮಿಜಾರುಗುತ್ತು ಆನಂದ ಆಳ್ವ, ತನ್ನ 99ನ ಹುಟ್ಟುಹಬ್ಬದ ಸಂದರ್ಭ ಉದ್ಘಾಟಿಸಿದರು.

ವಿದ್ಯಾರ್ಥಿ ನಿಲಯಗಳಾದ ಗಂಗಾ ಮತ್ತು ಯಮುನಾ ಹಾಗೂ ಗೋದಾವರಿ ವಿದ್ಯಾರ್ಥಿ ನಿಲಯ ಮಾವಿನಕಟ್ಟೆಯ ಕಟ್ಟಡಗಳು ಇದೇ ಸಂದರ್ಭ ಉದ್ಘಾಟನೆಗೊಂಡಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಅಬುಧಾಬಿಯ ಉದ್ಯಮಿ ಡಾ.ಬಿ.ಆರ್.ಶೆಟ್ಟಿ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಟ್ರಸ್ಟಿಗಳಾದ ಡಾ.ವಿನಯ್ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News